ಕೊಡ್ನೀರು ಕರೆಮನೆಕಟ್ಟೆ ಹಾಲು ಉತ್ಪಾದಕರ ಸೊಸೈಟಿ ನಿರ್ದೇಶಕ ಆನಂದ ಪೂಜಾರಿ ನಿಧನ

0

ಪುತ್ತೂರು: ಮುಂಡೂರು ನಡುಬೈಲುಗುತ್ತು ನಾರಾಯಣ ಸಾಲಿಯಾನ್ ಹಾಗೂ ದಿ.ಅಪ್ಪಿ ನಡುಬೈಲುರವರ ಪುತ್ರ, ಅಕ್ಷಯ ಕಾಲೇಜಿನ ಚೇರ್ಮನ್ ಜಯಂತ್ ನಡುಬೈಲುರವರ ಸಹೋದರ, ಕೊಡ್ನೀರು ಕರೆಮನೆಕಟ್ಟೆ ಹಾಲು ಉತ್ಪಾದಕರ ಸೊಸೈಟಿ ನಿರ್ದೇಶಕ ಆನಂದ ಪೂಜಾರಿ(49ವ.)ರವರು ಅನಾರೋಗ್ಯದಿಂದ ಆ.5 ರಂದು ಬೆಳಿಗ್ಗೆ ಎರಡು ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಆನಂದ ಪೂಜಾರಿಯವರು ಪ್ರಗತಿಪರ ಕೃಷಿಕರಾಗಿದ್ದು ಪುರುಷರಕಟ್ಟೆಯಲ್ಲಿ ಅಕ್ಷಯ ಚಿಕನ್ ಸೆಂಟರ್ ನಡೆಸುತ್ತಿದ್ದರು. ಮೃತರು ತಂದೆ ನಾರಾಯಣ ಸಾಲಿಯಾನ್, ಪತ್ನಿ ಸುಧಾ, ಪುತ್ರಿಯರಾದ ನಿಖಿತಾ, ಸುಶ್ಮಿತಾ, ಪುತ್ರ ನಮೃತ್, ಸಹೋದರ ಅಕ್ಷಯ ಕಾಲೇಜು ಚೇರ್ಮನ್ ಜಯಂತ್ ನಡುಬೈಲು, ಸಹೋದರಿಯರಾದ ಸುಲೋಚನಾ, ಸುಭಾಷಿನಿ, ವೀಣಾರವರನ್ನು ಅಗಲಿದ್ದಾರೆ.

ಮೃತರ ಮನೆಗೆ ಪುತ್ತೂರು ಬಿಲ್ಲವ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಕೊಡ್ನೀರು ಕರೆಮನೆಕಟ್ಟೆ ಹಾಲು ಉತ್ಪಾದಕರ ಸೊಸೈಟಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ತಾಲೂಕು ಯುವವಾಹಿನಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಿತ ಹಲವರು ಆಗಮಿಸಿ ಸಾಂತ್ವನಿಸಿದರು .

LEAVE A REPLY

Please enter your comment!
Please enter your name here