ಡಿಂಬ್ರಿಗುತ್ತು ಸರಸ್ವತಿ ವಿ.ರೈ ಕುರ್ಲೆತ್ತಿಮಾರ್‌ರವರಿಗೆ ಶ್ರದ್ಧಾಂಜಲಿ

0

ಸರಸ್ವತಿ ವಿ.ರೈಯವರ ಆದರ್ಶ ಬದುಕು ಸಮಾಜಕ್ಕೆ ಮಾದರಿ- ಗಂಗಾಧರ್ ಆಳ್ವ


ಪುತ್ತೂರು: ಡಿಂಬ್ರಿಗುತ್ತು ದಿ.ವಿಠಲ ರೈಯವರ ಪತ್ನಿ ಡಿಂಬ್ರಿಗುತ್ತು ಸರಸ್ವತಿ ವಿ.ರೈ ಕುರ್ಲೆತ್ತಿಮಾರ್‌ರವರ ಉತ್ತರ ಕ್ರಿಯೆಯು ಆ.5 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.

ಶ್ರದ್ಧಾಂಜಲಿ ಸಭೆಯಲ್ಲಿ ತುಂಬೆ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಎನ್.ಗಂಗಾಧರ್ ಆಳ್ವ ಮಾತನಾಡಿ ಸರಸ್ವತಿ ವಿ.ರೈರವರು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸರಸ್ವತಿ ವಿ.ರೈಯವರು ತಾವು ಪಾಲಿಸಿಕೊಂಡು ಬಂದಿದ್ದ ಸಂಸ್ಕಾರ, ಕ್ರಮಬದ್ದ ಜೀವನ ಮೌಲ್ಯವನ್ನು ಅವರ ಮಕ್ಕಳು ಪಾಲಿಸಿಕೊಂಡು ಬಂದಿದ್ದಾರೆ. ಇದರಿಂದಾಗಿ ಅವರ ಮಕ್ಕಳು ಕೂಡ ಸಮಾಜದಲ್ಲಿ ಉತ್ತಮವಾದ ಗೌರವಯುತವಾದ ಬದುಕು ಸಾಗಿಸುತ್ತಿದ್ದಾರೆ. ಸರಸ್ವತಿ ವಿ.ರೈಯವರ ಆದರ್ಶ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದು ನುಡಿನಮನ ಸಲ್ಲಿಸಿದರು.


ಸರಸ್ವತಿ ವಿ.ರೈಯವರ ಪುತ್ರ ಸತೀಶ್ ರೈ ಡಿಂಬ್ರಿಗುತ್ತು, ಸೊಸೆ ಪ್ರಮೋದ ಎಸ್ ರೈ, ಪುತ್ರಿ ಶಶಿಪ್ರಭ ಉದಯಪ್ರಸಾದ್ ಶೆಟ್ಟಿ, ಮೊಮ್ಮಕ್ಕಳಾದ ಸೋನಂ ಶೆಟ್ಟಿ, ಪ್ರತೀಕ್ ಎಸ್ ರೈ, ಪ್ರತೀಶ್ ಎಸ್ ರೈ ಹಾಗೂ ಕುರ್ಲೆತ್ತಿಮಾರ್ ಹಾಗೂ ಡಿಂಬ್ರಿಗುತ್ತು ಕುಟುಂಬಸ್ಥರು, ಊರ,ಪರವೂರ ಹಿತೈಷಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ 350ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here