ಸುದ್ದಿ ಬಿಡುಗಡೆ ವ್ಯವಸ್ಥಾಪಕ ಚಂದ್ರಶೇಖರ್ ಉಮಿಗದ್ದೆ ನಿಧನ

0

ಪುತ್ತೂರು:ಪುತ್ತೂರು ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕರಾಗಿದ್ದ ಚಂದ್ರಶೇಖರ್ ಗೌಡ ಉಮಿಗದ್ದೆ (58ವ.)ಅವರು ಅಲ್ಪಕಾಲದ ಅಸೌಖ್ಯದಿಂದ ಆ.6ರಂದು ರಾತ್ರಿ ಸ್ವಗೃಹ ಆರ್ಯಾಪು ಗ್ರಾಮದ ಮರಿಕೆಯಲ್ಲಿ ನಿಧನರಾದರು.

ಸುದ್ದಿ ಬಿಡುಗಡೆ ಪತ್ರಿಕೆ ಆರಂಭದ ದಿನಗಳಿಂದಲೇ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಲ್ನಾಡು ಗ್ರಾಮದ ಉಮಿಗದ್ದೆ ಮೂಲದ ಇವರು ಆರಂಭದಲ್ಲಿ ವರದಿಗಾರರಾಗಿ ಕೆಲಸ ಮಾಡಿ, ಬಳಿಕ ಜಾಹಿರಾತು ವ್ಯವಸ್ಥಪಾಕರಾಗಿ, ಕಚೇರಿ ವ್ಯವಸ್ಥಾಪಕರಾಗಿದ್ದ ಅವರು ಕೆಲ ಸಮಯ ಮಂಗಳೂರು ಕಚೇರಿಯಲ್ಲಿಯೂ ಕೆಲಸ ಮಾಡಿದ್ದರು.

ಸುಮಾರು 34 ವರ್ಷಗಳಿಂದ ಇವರು ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿಯಲ್ಲಿ ಓರ್ವ ಪ್ರಾಮಾಣಿಕ ನೌಕರನಾಗಿ ಕೆಲಸ ಮಾಡಿಕೊಂಡಿದ್ದು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು.

ಮೃತರು ಪತ್ನಿ ಶೀಲಾವತಿ ಹಾಗೂ ಇನ್ಫೋಸಿಸ್ ಉದ್ಯೋಗಿಯಾಗಿರುವ ಪುತ್ರ ರೋಹಿತ್ ಅವರನ್ನು ಅಗಲಿದ್ದಾರೆ.ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ್‌, ಶ್ರೀಮತಿ ಶೋಭಾ ಶಿವಾನಂದ್‌, ಸಿಇಒ ಸೃಜನ್‌ ಊರುಬೈಲು, ಬೆಳ್ತಂಗಡಿ ಸಿಇಒ ಸಿಂಚನ ಊರುಬೈಲು ಸೇರಿದಂತೆ ಅನೇಕ ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here