ಕರಾಟೆ ಸ್ಪರ್ಧೆ -ನರಿಮೊಗರು ಸಾಂದೀಪನಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

0

ಪುತ್ತೂರು: 2024-25 ಸಾಲಿನ ಶಾಲಾ ಶಿಕ್ಷಣ ಇಲಾಖೆಯಿಂದ ಪುತ್ತೂರಿನ ಸಂತ ವಿಕ್ಟರ್ಸ್ ಬಾಲಿಕ ಪ್ರೌಢ ಶಾಲೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ 17ರ ವಯೋಮಾನದ ಕರಾಟೆ ಸ್ಪರ್ಧೆಯಲ್ಲಿ ಸಾಂದೀಪನಿ ವಿದ್ಯಾರ್ಥಿಗಳಾದ ಭುವನ್ ಕರಂದ್ಲಾಜೆ, ವೈಭವಿ ಲಕ್ಷ್ಮಿ, ಅಜಯ್ ಕೃಷ್ಣ, ಧನ್ವಿನ್ ಹಾಗೂ 14 ರ ವಯೋಮಾನದ ವಿಭಾಗದ ವಿದ್ಯಾರ್ಥಿಗಳಾದ ತುಷಾರ್, ಅಭೀಶ್ ರೈ, ಪೃಥ್ವಿ ಕೃಷ್ಣ , ಜ್ಞಾನ ರೈ , ಧೃತಿ ಎಮ್ ಇವರುಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ ಎನ್ ಹಾಗೂ ತರಬೇತುದಾರ ನಾರಾಯಣ ಆಚಾರ್ಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here