ಕರಾಟೆ ಸ್ಪರ್ಧೆ: ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

0

ಪುತ್ತೂರು:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇದರ ಆಶ್ರಯದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯಲ್ಲಿ ಜರುಗಿದ ಪುತ್ತೂರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ಖುಶಿ ಕೆ.ಎಂ(ಪ್ರಥಮ) ರಂಶ ಡಿ.ಕೆ., ಚಂದನ, ಇಚ್ಛಿಕಾರವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಖುಶಿ ಕೆ.ಎಂ.ರವರು ಕೆ.ವಿ ಮಂಜುನಾಥ್ ಹಾಗೂ ಭವ್ಯ ದಂಪತಿ ಪುತ್ರಿ. ರಂಶ ಡಿ. ಕೆ ಮಹಮ್ಮದ್ ಶರೀಫ್ ಡಿ. ಕೆ. ಹಾಗೂ ರೇಶ್ಮಾ ಎಚ್.ಎ ದಂಪತಿ ಪುತ್ರಿ. ಚಂದನ ರಮೇಶ್ ಡಿ ಹಾಗೂ ಹರಿಣಾಕ್ಷಿ ದಂಪತಿ ಪುತ್ರಿ. ಇಚ್ಛಿಕಾ ಪ್ರದೀಪ್ ಜೈನ್ ಹಾಗೂ ಪ್ರೇಕ್ಷಾ ಎಸ್ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here