ಕೊಳ್ತಿಗೆ ಯುವಕ ಮಂಡಲಕ್ಕೆ ಆಯ್ಕೆ

0

ಅಧ್ಯಕ್ಷ: ಹರ್ಷಿತ್ ಕುದ್ಕುಳಿ, ಕಾರ್ಯದರ್ಶಿ: ನಾಗೇಶ್ ಬೀರ್ಣಕಜೆ, ಕೋಶಾಧಿಕಾರಿ: ದಯಾನಂದ ನೀಟಡ್ಕ


ಪುತ್ತೂರು: ಕೊಳ್ತಿಗೆ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ಆ.7 ರಂದು ಭರತ್‌ರಾಜ್ ಕುದ್ಕುಳಿಯವರ ಅಧ್ಯಕ್ಷತೆಯಲ್ಲಿ ಕೊಳ್ತಿಗೆ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಯುವಕ ಮಂಡಲಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹರ್ಷಿತ್ ಕುದ್ಕುಳಿ, ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಬೀರ್ಣಕಜೆ, ಕೋಶಾಧಿಕಾರಿಯಾಗಿ ದಯಾನಂದ ನೀಟಡ್ಕ, ಉಪಾಧ್ಯಕ್ಷರಾಗಿ ಸುರೇಶ್ ಪೂಜಾರಿ ಕೋಡಂಬು, ಜತೆ ಕಾರ್ಯದರ್ಶಿಯಾಗಿ ಶ್ರೀಧರ ಕೋಡಂಬು, ಕ್ರೀಡಾ ಕಾರ್ಯದರ್ಶಿಗಳಾಗಿ ತೀರ್ಥರಾಜ್ ಪೆರ್ಲಂಪಾಡಿ, ಗೌತಮ್ ಪೆರ್ಲಂಪಾಡಿ, ಜ್ಞಾನೇಶ್ ಕಾನತಬರಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ವಿನುತ್ ಗೋಳಿತಡ್ಕ, ತಿಲಕ್ ಕುದ್ಕುಳಿ, ಸಂಘಟನಾ ಕಾರ್ಯದರ್ಶಿಯಾಗಿ ಅಶ್ವಿತ್ ಕೆಂಪುಗುಡ್ಡೆ, ಪತ್ರಿಕಾ ಕಾರ್ಯದರ್ಶಿಯಾಗಿ ನಿತಿನ್ ಪೆರ್ಲಂಪಾಡಿರವರುಗಳನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪವನ್ ಡಿ.ಜಿ ದೊಡ್ಡಮನೆ, ವಿಜೇಶ್ ರೈ ಕೆಳಗಿನಮನೆ, ಹರ್ಷೆಂದ್ರ ಪಟ್ಲ, ಸನತ್ ಕುಮಾರ್ ಚಾಲೆಪಡ್ಪು, ಶೈಲೇಶ್ ಪಟ್ಲ, ಹವ್ಯಾಸ್, ವಿನೋದ್ ಕುಮಾರ್ ಬಿಲ್ಲಂತಡ್ಕ, ಕಿಶೋರ್ ಕುಮಾರ್ ಬೀಜದಕುಮೇರು, ಭಾಸ್ಕರ ಅಜಾಢ, ರಕ್ಷಿತ್ ಕುದ್ಕುಳಿ, ಯಶ್ವಿನ್ ಕೋಡಂಬುರವರುಗಳನ್ನು ಆಯ್ಕೆ ಮಾಡಲಾಯಿತು. ಇದಲ್ಲದೆ ಯುವಕ ಮಂಡಲಕ್ಕೆ ಗೌರವ ಸಲಹೆಗಾರರಾಗಿ ಪ್ರಮೋದ್ ಕೆ.ಎಸ್, ವೆಂಕಟ್ರಮಣ ಆಚಾಯ್, ಶಿವರಾಮ ಪೂಜಾರಿ, ಪ್ರವೀಣ ಜಿ.ಕೆ, ಅಶೋಕ ಒರ್ಕೊಂಬುರವರುಗಳನ್ನು ನೇಮಕ ಮಾಡಲಾಯಿತು. ಗೌರವ ಸಲಹೆಗಾರರಾದ ವೆಂಕಟ್ರಮಣ ಆಚಾರ್ಯ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಭರತ್‌ರಾಜ್ ಕುದ್ಕುಳಿ ಸ್ವಾಗತಿಸಿದರು, ವಿಜೇಶ್ ರೈ ಕೆಳಗಿನಮನೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಸರ್ವ ಸದಸ್ಯರುಗಳು ಸಹಕರಿಸಿದ್ದರು.

LEAVE A REPLY

Please enter your comment!
Please enter your name here