ಕೆಯ್ಯೂರು: ಕಣಿಯಾರು ಭಾಗಕ್ಕೆ ಸ್ವಚ್ಛ ವಾಹಿನಿ ವಾಹನ ಸಂಚಾರ ಆರಂಭ

0

ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಕಣಿಯಾರು ಪ್ರದೇಶಕ್ಕೆ ಸ್ವಚ್ಚ ವಾಹಿನಿ ವಾಹನವು ಸಂಚಾರ ಆರಂಭಿಸಿತು. ಕಣಿಯಾರು ಭಾಗಕ್ಕೆ ವಾಹನ ಬರಬೇಕು ನಮ್ಮಲ್ಲಿ ಹಲವು ಮನೆಗಳಿದ್ದು ಕಸ ವಿಲೇವಾರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮ ಸಭೆಯಲ್ಲಿ ಸಾರ್ವಜನಿಕ ಮನವಿ ಮಾಡಿಕೊಂಡಿದ್ದರು.

ಅದರಂತೆ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಹಾಗೂ ಸ್ವಚ್ಛತಾ ವಾಹನದ ಸಿಬ್ಬಂದಿಗಳು ಕಣಿಯಾರು ಭಾಗಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಕಿಟ್ಟ ಅಜಿಲ ಕಣಿಯಾರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here