ವಿಟ್ಲ :ಕೆಎಸ್ಆರ್ಟಿಸಿ ರಿಕ್ಷಾ ಪಾರ್ಕಿಂಗ್ ತೆರವಿನ ಸೂಚನೆ -ರಿಕ್ಷಾ ಚಾಲಕರಿಂದ ಶಾಸಕರಿಗೆ ದೂರು

0

ಪುತ್ತೂರು: ವಿಟ್ಲ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇದ್ದ ರಿಕ್ಷಾ ಪಾರ್ಕಿಂಗನ್ನು ತೆರವು ಮಾಡುವಂತೆ ಕೆಎಸ್ಆರ್ಟಿಸಿ ಸೂಚನೆ ನೀಡಿದ್ದು ಇದರ ವಿರುದ್ದ ರಿಕ್ಷಾ ಚಾಲಕರು ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದ್ದಾರೆ.


ಈ ಬಗ್ಗೆ ದೂರು‌ ನೀಡಿರುವ ರಿಕ್ಷಾ ಚಾಲಕರು‌ ನಾವು ಕಳೆದ ಹಲವು ವರ್ಷಗಳಿಂದ ನಾವು ಈ ಪ್ರದೇಶದಲ್ಲಿ ರಿಕ್ಷಾ ಪಾರ್ಕಿಂಗ್ ಮಾಡುತ್ತಿದ್ದು ಕೆಎಸ್ ಆರ್ ಟಿ ಸಿ ಅಧಿಕಾರಿಗಳು ನಮ್ಮ ಪಾರ್ಕಿಂಗನ್ನು ತೆರವು ಮಾಡಿದ್ದಾರೆ. ಇದರಿಂದ ನಮ್ಮ ಆದಾಯಕ್ಕೆ ತೊಂದರೆಯಾಗಿದ್ದು ಅಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ ಶಾಸಕರು ಅಲ್ಲಿ ಈ ಹಿಂದೆ ಇದ್ದ ಪಾರ್ಕಿಂಗನ್ನು ತೆರವು‌ ಮಾಡದಂತೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here