ಎವಿಜಿ ಇಂಗ್ಲೀಷ್ ಮೀಡಿಯಂ ಶಾಲಾ ನೂತನ ರಕ್ಷಕ ಶಿಕ್ಷಕ ಸಂಘ ರಚನೆ 

0

ಪುತ್ತೂರು: ಪುತ್ತೂರು ಕೃಷ್ಣನಗರದ ಬನ್ನೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘವನ್ನು ಆಗಸ್ಟ್ 10ರಂದು ರಚಿಸಲಾಯಿತು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸೌಮ್ಯಶ್ರೀ ಶಿವಪ್ರಸಾದ್ ಹೆಗ್ಡೆ ,ಉಪಾಧ್ಯಕ್ಷರಾಗಿ ಕಾವ್ಯ ಕೆ ,ಕಾರ್ಯದರ್ಶಿಯಾಗಿ ಶಾಲಾ ಪ್ರಾಂಶುಪಾಲೆ  ಸವಿತಾ ಆಯ್ಕೆಯಾದರು. ಹಾಗೂ ಸದಸ್ಯರಾಗಿ ಯೋಗೀಶ್, ಸುಮಲತಾ, ಅಶ್ವಿನಿ ,ರಾಧಿಕಾ ಹರೀಶ್ ಕೆ ತೆಂಕಪಾಡಿ ಇವರು ಆಯ್ಕೆಯಾದರು.

ಶಾಲೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ‌ ಪ್ರಕ್ರಿಯೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಸಭೆಯ ಅಧ್ಯಕ್ಷತೆ ವಹಿಸಿ ನೂತನವಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಿಗೆ ,ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಎ ವಿ ನಾರಾಯಣ ,ಪ್ರಧಾನ ಕಾರ್ಯದರ್ಶಿ  ಗುಡ್ಡಪ್ಪ ಗೌಡ ಬಲ್ಯ ರವರು ಶಾಲೆಯ ನಿಯಮ ಹಾಗೂ ಪೋಷಕರ ಪಾತ್ರದ ಬಗ್ಗೆ ಮಾತನಾಡಿದರು. ಉಪಾಧ್ಯಕ್ಷ ಉಮೇಶ್ ಗೌಡ ಮಳುವೇಲು ಹಾಗು ನಿರ್ದೇಶಕಿ ಪುಷ್ಪಾವತಿ ಗೌಡ ಕಳುವಾಜೆ ಉಪಸ್ಥಿತರಿದ್ದು ಶುಭ ಕೋರಿದರು. ಪ್ರಾಂಶುಪಾಲೆ ಸವಿತಾ ಕುಮಾರಿ ಸ್ವಾಗತಿಸಿ, ಶಾಲೆಯ ಶೈಕ್ಷಣಿಕ ವಿಷಯಗಳ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ರೀಮಾ ಲೋಬೊ ವಂದಿಸಿದರು. ಶಿಕ್ಷಕಿಯರಾದ  ರಾಧಾ ಹಾಗೂ ಕುಮಾರಿ ಪ್ರಕ್ಷುತ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here