ಆ.16- 17: ಮುಂಬಯಿಯಲ್ಲಿ ನೆಟ್ಕಾನ್ ರಾಷ್ಟ್ರೀಯ ಕಾನ್ಪರೆನ್ಸ್-ಪುತ್ತೂರಿನ 15 ಇಂಜಿನಿಯರ್ ಗಳು ಭಾಗಿ-ಪುತ್ತೂರು ವಿಭಾಗಕ್ಕೆ ಎರಡು ಪ್ರಶಸ್ತಿ

0

ಪುತ್ತೂರು: ಆ.16- 17 ರಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಮುಂಬಯಿಯಲ್ಲಿ ಆಯೋಜಿಸುವ ರಾಷ್ಟ್ರೀಯ ನೇಟ್ಕಾನ್ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ. ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ ವ್ಯಾಪ್ತಿಯನ್ನೊಳಗೊಂಡ ಪುತ್ತೂರು ಸೆಂಟರ್ ನಿಂದ 15 ಮಂದಿ ಭಾಗವಹಿಸಲಿದ್ದಾರೆ.

ಇಂಜಿನಿಯರ್ ಗಳಾದ ಪ್ರಮೋದ್, ವಿನೋದ್, ಚೇತನ್, ಶಿವರಾಮ, ಎಚ್ ಅಜಿತ್, ಬಾಲಕೃಷ್ಣ, ಎಲ್.ಸಿ ಸೀಕ್ವೆರಾ, ಹರಿಶ್, ಆದರ್ಶ, ರಾಜಶೇಖರ, ಕನಿಷ್ಕಾ, ಪ್ರಸನ್ನದರ್ಬೆ, ಲೊಕೇಶ್, ದೇವಿಪ್ರಸಾದ್, ಚಂದ್ರಶೇಖರ ಭಾಗವಹಿಸಲಿರುವವರು. ಸಮಾವೇಶದಲ್ಲಿ ಪುತ್ತೂರು ವಿಭಾಗವು ಉತ್ತಮ ಸಂಘಟಕ ಹಾಗೂ ಉತ್ತಮ ಬೆಳವಣಿಗೆ ಸಂಘಟನೆ ಪ್ರಶಸ್ತಿ ಪಡೆಯಲಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here