ಆ.17: ಗೋಳಿತ್ತೊಟ್ಟಿನಲ್ಲಿ ಕೃಷಿ ಪಂಪುಸೆಟ್ ಆರ್‌ಆರ್ ನಂಬರ್‌ಗೆ ಆಧಾರ್ ನಂಬರ್ ಜೋಡಣೆ ಶಿಬಿರ

0

ನೆಲ್ಯಾಡಿ: ಮೆಸ್ಕಾಂ ಉಪ್ಪಿನಂಗಡಿ ಶಾಖೆ ವತಿಯಿಂದ ಆ.17ರಂದು ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ರೈತರ ಕೃಷಿ ಪಂಪುಸೆಟ್ ಆರ್‌ಆರ್ ನಂಬರ್‌ಗೆ ಆಧಾರ್ ನಂಬರ್ ಜೋಡಣೆ ಶಿಬಿರ ನಡೆಯಲಿದೆ.


ಈ ಶಿಬಿರದಲ್ಲಿ ಗೋಳಿತ್ತೊಟ್ಟು, ಆಲಂತಾಯ, ಮೇಲೂರು, ಶಾಂತಿನಗರ, ಬಜತ್ತೂರು ಗ್ರಾಮದ ಕೃಷಿ ಪಂಪುಸೆಟ್ ಬಳಕೆದಾರರು ತಮ್ಮ ಪಂಪು ಸೆಟ್‌ನ ಆರ್‌ಆರ್ ನಂಬರ್‌ಗೆ ಆಧಾರ್ ನಂಬರ್ ಲಿಂಕ್ ಮಾಡಲು ಹಾಗೂ ಖಾತೆಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಕೃಷಿ ಪಂಪುಸೆಟ್ ಬಳಕೆದಾರರು ಬರುವಾಗ ಆಧಾರ್ ಕಾರ್ಡ್, ಕೃಷಿ ಪಂಪ್‌ಸೆಟ್‌ನ ಆರ್‌ಆರ್ ನಂಬರ್, ಆರ್‌ಟಿಸಿ ಹಾಗೂ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ತರುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here