ನನ್ನನ್ನು ಯಾವುದೇ ಜವಾಬ್ದಾರಿಗೆ ಪರಿಗಣಿಸಬೇಡಿ-ಸಹಜ್ ರೈ ಪತ್ರ:ಜಿಲ್ಲಾಧ್ಯಕ್ಷರಿಂದ ಮೆಚ್ಚುಗೆ

0

ಪುತ್ತೂರು: ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷತೆಗೆ ಹಲವರ ಹೆಸರು ಕೇಳಿ ಬರುತ್ತಿತ್ತು. ಯುವ ಉದ್ಯಮಿ ಸಹಜ್ ರೈ ಬಳಜ್ಜ ಅವರ ಹೆಸರೂ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷತೆಗೆ ಕೇಳಿ ಬರುತ್ತಿತ್ತು.ಆದರೆ,ನನ್ನ ಹೆಸರನ್ನು ಮಂಡಲ ಅಥವಾ ಯಾವುದೇ ಜವಾಬ್ದಾರಿಗೆ ಪರಿಗಣಿಸದಂತೆ ಸಹಜ್ ರೈಯವರು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದರು.ಈ ವಿಚಾರವನ್ನು ಜಿಲ್ಲಾಧ್ಯಕ್ಷರು ಬಿಜೆಪಿ ಸಭೆಯಲ್ಲಿ ಪ್ರಸ್ತಾಪಿಸಿ,ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.

ನಾನು ನನ್ನ ಉದ್ಯಮದ ಕಡೆಗೆ ಹೆಚ್ಚು ತೊಡಗಿಸಿಕೊಳ್ಳುವ ಹಿನ್ನೆಲೆಯಲ್ಲಿ ನನಗೆ ಪಕ್ಷದ ಕೆಲಸಕ್ಕೆ ಸಮಯ ಕೊಡಲು ಕಷ್ಟವಾಗುತ್ತದೆ.ನನ್ನ ಹೆಸರನ್ನು ಮಂಡಲ ಅಥವಾ ಯಾವುದೇ ಜವಾಬ್ದಾರಿಗೆ ಪರಿಗಣಿಸಬಾರದಾಗಿ ಕೇಳಿಕೊಳ್ಳುತ್ತೇನೆ.ನಾನು ನನ್ನ ಕೈಯಿಂದಾಗುವಷ್ಟರ ಮಟ್ಟಿಗೆ ಪಕ್ಷದ ಚಟುವಟಿಕೆಯಲ್ಲಿ ಓರ್ವ ಕಾರ್ಯಕರ್ತನಾಗಿ ತೊಡಗಿಸಿಕೊಳ್ಳುವುದಾಗಿ ಸಹಜ್ ರೈಯವರು ಜೂ.20ರಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರಿಗೆ ಪತ್ರ ಬರೆದಿದ್ದರು.ಆ.14ರಂದು ನಡೆದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಸಹಜ್ ರೈಯವರ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.ಸಹಜ್ ರೈಯವರು ಪ್ರಸ್ತುತ ಬಿಜೆಪಿ ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ.

LEAVE A REPLY

Please enter your comment!
Please enter your name here