ಕುಂಬ್ರ: ಬೈರೋಡಿ ಮೊಸರುಕುಡಿಕೆ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಒಳಮೊಗ್ರು ಗ್ರಾಮದ ಬೈರೋಡಿ ಶ್ರೀ ವೀರಕೇಸರಿ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ನಡೆಯುವ 13 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಅಂಗವಾಗಿ ಮೊಸರುಕುಡಿಕೆ ಉತ್ಸವ (ಅಡ್ಡಕಂಬ) ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಸಂದೀಪ್ ರೈ ಚಿಲ್ಮೆತ್ತಾರು , ನಿಕಟ ಪೂರ್ವ ಅಧ್ಯಕ್ಷ ಪುರಂದರ ರೈ ನಾಲ , ಪ್ರಕಾಶ್ ಬೈರೋಡಿ , ಶಶಿರಾಜ್ ರೈ ಚಿಲ್ಮೆತ್ತಾರು , ಮೋಹನ್ ಕೆ , ಬಾಲಕೃಷ್ಣ ರೈ ಬಿ , ಮೋಹನ್ ಬಿ , ಸಂಘಟನಾ ಕಾರ್ಯದರ್ಶಿ ಮಹೇಶ್ ರೈ ಕೇರಿ ಸೇರಿದಂತೆ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು , ಸದಸ್ಯರು ಭಾಗವಹಿಸಿದ್ದರು. ಆ. 26 ರಂದು ಪುಟಾಣಿಗಳ ಶ್ರೀ ಕೃಷ್ಣ ಲೋಕ ಹಾಗೂ ವಿವಿಧ ಕ್ರೀಡಾ ಚಟುವಟಿಕೆಗಳೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ನಡೆಯಲಿದೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here