ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ದೇವಳದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಹಲವು ಸಾಮಾಜಿಕ ಚಟುವಟಿಕೆಯ ಪ್ರಯುಕ್ತ ಇತ್ತೀಚೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿರುವ ವಾಸುಕಿ ನಾಗಸನ್ನಿಧಿ, ಅಯ್ಯಪ್ಪ ಗುಡಿಯ ಆಸುಪಾಸಿನ ಪರಿಸರ ಸ್ವಚ್ಚತೆ ಮಾಡಲಾಯಿತು.


ಪ್ಲಾಸ್ಟಿಕ್ ಹೆಕ್ಕುವ ಮೂಲಕ ಬಹಳಷ್ಟು ಜೈವಿಕ ಮಾರಕವಾದ ಕಸದಿಂದ ಮುಕ್ತಗೊಳಿಸುವ ಸಣ್ಣ ಪ್ರಯತ್ನ ಮಾಡಲಾಯಿತು. ವಿದ್ವಾನ್ ದೀಪಕ್ ಕುಮಾರವರ ಆಶಯದಂತೆ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಓರ್ವ ಪೋಷಕರಾದ ಮಾಜಿ ಸೈನಿಕ ವಿಜಯಕುಮಾರ್ ನೆಲಪ್ಪಾಲು ಸ್ವಚ್ಚತೆಯಲ್ಲಿ ಕೈಜೋಡಿಸಿದ್ದರು.

LEAVE A REPLY

Please enter your comment!
Please enter your name here