ಪುತ್ತೂರು : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೆ. ಪಿ. ಎಸ್. ಕುಂಬ್ರ ಇಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುವ ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಪ್ರೌಢ ಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಮತ್ತು ಪ್ರಾಥಮಿಕ ಶಾಲಾ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರೌಢ ಶಾಲಾ ತಂಡದಲ್ಲಿ 8ನೇ ತರಗತಿಯ ಧನುಷಾ, ಧನ್ವಿ, ಮಾನ್ವಿ, ಪೂಜನ, ಸಿಂಚನ ಹಾಗೂ ದೀಪ್ತಿ ಭಾಗವಹಿದ್ದರು. ಪ್ರಾಥಮಿಕ ಶಾಲಾ ತಂಡದಲ್ಲಿ 7ನೇ ತರಗತಿಯ ಆತ್ಮಿ, ಮಾನ್ಯ, ಆಕಾಂಕ್ಷ, ಸುಜನ, ನಿರೀಕ್ಷ, ವಿಭ ಮತ್ತು 6ನೇ ತರಗತಿಯ ಸಾನಿಕ, ಶ್ರಾವ್ಯ ಹಾಗೂ ಆರಾಧ್ಯ ಭಾಗವಹಿಸಿದ್ದರು.