ಉಪ್ಪಿನಂಗಡಿ: ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ

0

ಉಪ್ಪಿನಂಗಡಿ: ಸೀಮೆ ದೇವಸ್ಥಾನವಾದ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಈಗಿನ ವ್ಯವಸ್ಥಾಪನಾ ಸಮಿತಿಯು ಹಾಕಿಕೊಂಡ ನೂತನ ಯೋಜನೆಯಂತೆ ಈ ದೇವಾಲಯದ ಸೀಮೆಗೊಳಪಟ್ಟ ಹಿರೇಬಂಡಾಡಿ ಗ್ರಾಮಸ್ಥರು ದೇವಾಲಯದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.


ಈ ಸಂದರ್ಭ ದೇವಾಲಯದ ವಠಾರ, ನೇತ್ರಾವತಿ ನದಿ ದಂಡೆಗಳನ್ನು ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್, ದೇವಿದಾಸ ರೈ ಅಡೆಕ್ಕಲ್, ಕೃಷ್ಣರಾವ್ ಆರ್ತಿಲ, ವೆಂಕಪ್ಪ ಪೂಜಾರಿ ಮರುವೇಲು, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ರೈತ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಹಿರೇಬಂಡಾಡಿ ಗ್ರಾಮದ ಪ್ರಮುಖರಾದ ಸದಾನಂದ ಶೆಟ್ಟಿ, ಸತೀಶ್ ಶೆಟ್ಟಿ ಹೆನ್ನಾಳ, ಗೀತಾ ದಾಸರಮೂಲೆ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here