ದೊಡ್ಡಡ್ಕ: ಅಂಗಡಿಗೆ ದುಷ್ಕರ್ಮಿಗಳಿಂದ ಬೆಂಕಿ!

0

ಪುತ್ತೂರು: ಬುಳೇರಿಕಟ್ಟೆ ಸಮೀಪದ ದೊಡ್ಡಡ್ಕ ಎಂಬಲ್ಲಿ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಆ.21ರ ತಡರಾತ್ರಿ ನಡೆದಿದೆ.

ದೊಡ್ಡಡ್ಕ ನಿವಾಸಿ ಸಂಕಪ್ಪ ಪೂಜಾರಿ ಎಂಬರಿಗೆ ಸೇರಿದ ಗೂಡಂಗಡಿಯಾಗಿದೆ. ಕಳೆದ ಕೆಲ ವರ್ಷಗಳಿಂದ ಸುಬ್ರಹ್ಮಣ್ಯ-ಮಂಜೇಶ್ವರ ಅಂತರ್‌ರಾಜ್ಯ ಹೆದ್ದಾರಿಯ ದೊಡ್ಡ ಎಂಬಲ್ಲಿ ಗೂಡಂಗಡಿ ಹಾಗೂ ಸಣ್ಣ ಕ್ಯಾಂಟೀನ್‌ನ್ನು ಜತೆಯಾಗಿ ನಡೆಸುತ್ತಿದ್ದರು. ತನ್ನ ಮನೆ ಸಮೀಪದಲ್ಲಿಯೇ ಅಂಗಡಿ ಹೊಂದದ್ದು ಸಂಜೆ 5 ಗಂಟೆಯ ತನಕ ಮಾತ್ರ ಅಂಗಡಿ ವ್ಯವಹಾರ ನಡೆಸುತ್ತಿದ್ದರು.

ಆ.21ರಂದು ಎಂದಿನಂತೆ ಸಂಜೆ 5 ಗಂಟೆಗೆ ಅಂಗಡಿ ಬಂದ್ ಮಾಡಿ ಹೋಗಿದ್ದರು. ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಗೂಡಂಗಡಿ ಹಾಗೂ ಕ್ಯಾಂಟೀನ್ ಸುಟ್ಟು ಹೋಗಿದ್ದು ಅಪಾರ ನಷ್ಟ ಉಂಟಾಗಿದೆ. ಗೂಡಂಗಡಿಗೆ ವಿದ್ಯುತ್ ಸಂಪರ್ಕವಿಲ್ಲದೇ ಇದ್ದು ಸೋಲಾರ್ ಮೂಲಕ ಅಂಗಡಿ ನಡೆಸುತ್ತಿದ್ದರು. ಸಂಪ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಆರ್ಯಾಪು ಗ್ರಾ.ಪಂ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ, ಬಲ್ನಾಡು ಗ್ರಾ.ಪಂ ಸದಸ್ಯ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸೇರಿದಂತೆ ಹಲವು ಮಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.


LEAVE A REPLY

Please enter your comment!
Please enter your name here