ಆ.26: ಕುಂತೂರು-ಎರ್ಮಾಳದಲ್ಲಿ ನಿಸರ್ಗ ನರ್ಸರಿ ಶುಭಾರಂಭ

0

ಪುತ್ತೂರು: ಕಡಬ ಕುಂತೂರು-ಎರ್ಮಾಳದಲ್ಲಿ ನಿಸರ್ಗ ನರ್ಸರಿ ಆ.26ರಂದು ಶುಭಾರಂಭಗೊಳ್ಳಲಿದೆ. ಪೆರಾಬೆ ಗ್ರಾ.ಪಂ ಅಧ್ಯಕ್ಷೆ ಸಂಧ್ಯಾ ಉದ್ಘಾಟನೆ ನೆರವೇರಿಸಲಿದ್ದಾರೆ. ಪೆರಾಬೆ ಗ್ರಾ.ಪಂ ಸದಸ್ಯ ಮೋಹನ್‌ದಾಸ್ ರೈ ಪರಾರಿ, ಪೆರಾಬೆ ಗ್ರಾ.ಪಂ ಮಾಜಿ ಅಧ್ಯಕ್ಷ ಬೇಬಿ ಪಾಟಾಳಿ, ಕುಂತೂರು ಮಾರ್ ಇವಾನಿಯಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಮುಖ್ಯಗುರು ಅಲೆನ್ ಮೇರಿ ಡಿ.ಯಂ, ಆಲಂಕಾರು ಸಿಎ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಈಶ್ವರ ಗೌಡ ಪಜ್ಜಡ್ಕ, ಶ್ರೀಕ್ಷೇತ್ರ ಶರವೂರು ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪೂವಪ್ಪ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನರ್ಸರಿಯಲ್ಲಿ ಅಡಿಕೆ, ತೆಂಗು ಮತ್ತು ಹಣ್ಣಿನ, ಹೂವಿನ ಗಿಡಗಳು ಲಭ್ಯವಿದೆ ಎಂದು ಮಾಲಕಿ ಗೀತಾ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here