ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ

0

ವಿಟ್ಲ: ಚಂದ್ರಯಾನ -3 ಇಸ್ರೋ ವಿಡಿಯೋ ಪ್ರದರ್ಶನ, ಪ್ರಾತ್ಯಕ್ಷಿಕೆ, ಪೋಸ್ಟರ್ ತಯಾರಿ ಇತ್ಯಾದಿ ಸ್ಪರ್ಧೆ ಸಹಿತ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮ ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ನಡೆಯಿತು.
ಮುಖ್ಯ ಶಿಕ್ಷಕರಾದ ಎಸ್. ಚೆನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ವಿಟ್ವಾರ ಸಂಸ್ಥೆಯ ಇಂಜಿನಿಯರ್ ವಿಶಾಲ್ ಮತ್ತು ರಕ್ಷಿತಾ ವಿಡಿಯೋ ಪ್ರದರ್ಶನ – ಪ್ರಾತ್ಯಕ್ಷಿಕೆ, ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ ಮಾಹಿತಿ ಮತ್ತು ರಸಪ್ರಶ್ನೆ ಸ್ಪರ್ಧೆ, ಚಿತ್ರಕಲಾ ಶಿಕ್ಷಕಿ ಐ. ಜಯಲಕ್ಷ್ಮಿ ಚಿತ್ರ ಕಲಾ ಸ್ಪರ್ಧೆ ನಡೆಸಿದರು.

ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಶ್ಯಾಮಲಾ ಕೆ., ಸುಷ್ಮಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಫಾತಿಮತ್ ನುಝಾ ಸ್ವಾಗತಿಸಿ, ಶಾಲಾ ನಾಯಕ ಎಸ್. ಅಬ್ದುಲ್ ರಹೀಮ್ ವಂದಿಸಿ,ಜಮೀಹ ಮತ್ತು ಮರ್ಯಂ ಸ್ವಾಬಿರಾ ನಿರೂಪಿಸಿ, ಸಾನಿಕ ಡಿ.ಎಸ್. ತಂಡ ಪ್ರಾರ್ಥಿಸಿ, ಮಹಮ್ಮದ್ ಹಫೀಝ್ ಸಹಕರಿಸಿದರು.

LEAVE A REPLY

Please enter your comment!
Please enter your name here