ತಾಲೂಕು ಯುವ ಬಂಟರ ಸಂಘದಿಂದ “ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬಲು”- ಡ್ರಾಯಿಂಗ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

0

*ಯುವಕರಿಗೆ ಸ್ಪೂರ್ತಿಯನ್ನು ತುಂಬುವ ಕೆಲಸ- ಹೇಮನಾಥ ಶೆಟ್ಟಿ
*ಬಂಟರ ಸಂಪೂರ್ಣ ಮಾಹಿತಿ ಲಭ್ಯ- ರಾಧಾಕೃಷ್ಣ ರೈ
*ಈ ಕಾರ್‍ಯಕ್ರಮ ಅರ್ಥ ಪೂರ್ಣ- ದುರ್ಗಾಪ್ರಸಾದ್ ರೈ
*ಗೌರವದ ಸ್ಥಾನ- ರವಿ ಶೆಟ್ಟಿ
*ಬಂಟರ ಸಂಘದ ಮಾರ್ಗದರ್ಶನ- ಹರ್ಷಕುಮಾರ್ ರೈ

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಸಹಸಂಸ್ಥೆ ಯುವ ಬಂಟರ ಸಂಘ ಪುತ್ತೂರು ತಾಲೂಕು ಇದರ ನೇತ್ರತ್ವದಲ್ಲಿ ಮಹಿಳಾ ಮತ್ತು ವಿದ್ಯಾರ್ಥಿ ಬಂಟರ ಸಂಘದ ಸಹಕಾರದೊಂದಿಗೆ ಆ.25ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ದೋಣಿಂಜೆಗುತ್ತು ಸರೋಜಿನಿ ಟಿ.ಶೆಟ್ಟಿ ಮತ್ತು ಮೂಡಂಬೈಲು ತಿಮ್ಮಪ್ಪ ಯಾನೆ ಉಗ್ಗಪ್ಪ ಶೆಟ್ಟಿ ವೇದಿಕೆಯಲ್ಲಿ “ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬಲು” ಕಾರ್‍ಯಕ್ರಮ ಜರಗಿತು. ಇದೇ ವೇಳೆ ಯುವ ಬಂಟರ ಸಂಘದಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಡ್ರಾಯಿಂಗ್ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.

ಯುವಕರಿಗೆ ಸ್ಪೂರ್ತಿಯನ್ನು ತುಂಬುವ ಕೆಲಸ- ಹೇಮನಾಥ ಶೆಟ್ಟಿ
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ದೀಪ ಬೆಳಗಿಸಿ, “ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬಲು” ಕಾರ್‍ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಒಂದು ಉತ್ತಮವಾದ ಕಾರ್‍ಯಕ್ರಮವನ್ನು ಯುವ ಬಂಟರ ಸಂಘ ಹಮ್ಮಿಕೊಂಡಿದೆ, ಇದಕ್ಕೆ ನಮ್ಮ ಪೂರ್ಣ ಬೆಂಬಲ ಇದೆ. ಯುವಕರಿಗೆ ಸ್ಪೂರ್ತಿಯನ್ನು ತುಂಬುವ ಕೆಲಸ ಇದರಿಂದ ಆಗುತ್ತದೆ. ಈ ಕಾರ್‍ಯಕ್ರಮಕ್ಕೆ ದೊಡ್ಡ ಮಟ್ಟದಲ್ಲಿ ಉದ್ಯಮಿ ರವಿ ಶೆಟ್ಟಿ ಕತ್ತಾರ್‌ರವರು ಸಹಕಾರ ನೀಡಿರುವುದು ತುಂಬಾ ಸಂತೋಷ ತಂದಿದೆ. ಮುಂದೆಯೂ ಉತ್ತಮವಾದ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಹೇಳಿದರು.

ಬಂಟರ ಸಂಪೂರ್ಣ ಮಾಹಿತಿ ಲಭ್ಯ- ರಾಧಾಕೃಷ್ಣ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ನೇತ್ರತ್ವದಲ್ಲಿ ಪ್ರತಿ ಗ್ರಾಮದಲ್ಲಿ ಇರುವ ಬಂಟರ ಮಾಹಿತಿ ಸಂಗ್ರಹವನ್ನು ಮಾಡುವ ಯೋಜನೆಯು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಇದರಿಂದ ಬಂಟರ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ ಎಂದರು.

ಈ ಕಾರ್‍ಯಕ್ರಮ ಅರ್ಥ ಪೂರ್ಣ- ದುರ್ಗಾಪ್ರಸಾದ್ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ ಬಂಟರ ಭವನದ ಬಂಟರೆ ಚಾವಡಿಯಲ್ಲಿ ನಡೆಯುವ ಈ ಕಾರ್‍ಯಕ್ರಮ ಅರ್ಥ ಪೂರ್ಣವಾಗಿದೆ. ಮುಂದೆಯೂ ಉತ್ತಮವಾದ ಅನೇಕ ಕಾರ್‍ಯಕ್ರಮಗಳು ಈ ಚಾವಡಿಯಲ್ಲಿ ನಡೆಯಲಿದೆ ಎಂದರು.

ಗೌರವದ ಸ್ಥಾನ- ರವಿ ಶೆಟ್ಟಿ
ಕತ್ತಾರ್‌ನ ಉದ್ಯಮಿ ರವಿ ಶೆಟ್ಟ ಮೂಡಂಬೈಲು ಮಾತನಾಡಿ ಯುವ ಬಂಟರು ಹಮ್ಮಿಕೊಂಡಿರುವ ಈ ಕಾರ್‍ಯಕ್ರಮ ಅರ್ಥಪೂರ್ಣ, ಬಂಟರಿಗೆ ಜಗತ್ತಿನಲ್ಲಿಯೇ ಗೌರವದ ಸ್ಥಾನ ಇದೆ. ಪುತ್ತೂರಿನ ಬಂಟರ ಸಾಧನೆಯು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಉದ್ಯಮಿ ರವಿ ಶೆಟ್ಟಿ ಕತ್ತಾರ್‌ರವರನ್ನು ತಾಲೂಕು ಯುವ ಬಂಟರ ಸಂಘದಿಂದ ಗೌರವಿಸಲಾಯಿತು.

ಬಂಟರ ಸಂಘದ ಮಾರ್ಗದರ್ಶನ- ಹರ್ಷಕುಮಾರ್ ರೈ
ಅಧ್ಯಕ್ಷತೆ ವಹಿಸಿದ್ದ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಸ್ವಾಗತಿಸಿದು.ಬಳಿಕ ಮಾತನಾಡಿದ ಅವರು, ಬಂಟರ ಸಂಘದ ಮಾರ್ಗದರ್ಶನದಲ್ಲಿ ಯುವ ಬಂಟರ ಕಾರ್‍ಯಕ್ರಮವನ್ನು ರೂಪಿಸುತ್ತಿದ್ದೇವೆ, “ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬಲು ಕಾರ್‍ಯಕ್ರಮಕ್ಕೆ ಪೂರ್ಣ ಸಹಕಾರವನ್ನು ನೀಡಿದ ಕತ್ತಾರ್‌ನ ಉದ್ಯಮಿ ರವಿ ಶೆಟ್ಟಿ ಮೂಡಂಬೈಲುರವರಿಗೆ ಕೃತಜ್ಞತೆ ಸಲ್ಲಿಸಿದರು.
ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈಯವರು ಶುಭಹಾರೈಸಿದರು.
ವೇದಿಕೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ತಾಲೂಕು ಮಹಿಳಾ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ಕುಸುಮಾ ಪಿ.ಶೆಟ್ಟಿ ಕೆರೆಕೋಡಿ, ಕೋಶಾಧಿಕಾರಿ ಅರುಣಾ ಡಿ.ರೈರವರುಗಳು ಉಪಸ್ಥಿತರಿದ್ದರು.
ಯುವ ಬಂಟರ ಸಂಘದ ಕೋಶಾಧಿಕಾರಿ ಶಿವಶ್ರೀ ರಂಜನ್ ರೈ ದೇರ್ಲ ವಂದಿಸಿದರು. ಶುಭ ರೈ ಪ್ರಾರ್ಥನೆಗೈದು, ಕಾರ್‍ಯಕ್ರಮ ನಿರೂಪಿಸಿದರು. ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕಾರ್ತಿಕ್ ರೈ, ವಿಜಯಲಕ್ಷ್ಮಿರವರುಗಳು ಅತಿಥಿಗಳನ್ನು ಗೌರವಿಸಿದರು.

ಯುವ ಬಂಟರ ಸಂಘದಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಡ್ರಾಯಿಂಗ್ ಸ್ಪರ್ಧಾ ವಿಜೇತರು
ಯುವ ಬಂಟರ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಅ.11ರಂದು ನಡೆಸಿದ ಡ್ರಾಯಿಂಗ್ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು
ವಿವರಗಳು: 1 ರಿಂದ 5 ನೇ ತರಗತಿ ಪ್ರಥಮ: ಪ್ರಸ್ತುತ್ ಆರ್. ಶೆಟ್ಟಿ ಹಾರಾಡಿ ಸರಕಾರಿ ಶಾಲೆ, ದ್ವಿತೀಯ: ಮನ್ವಿತ್ ಎಚ್. ಆಚಾರ್ಯ ವಿದ್ಯಾರಶ್ಮಿ ವಿದ್ಯಾಲಯ ಸವಣೂರು, ತೃತೀಯ: ಸಾಧ್ವಿ ಎಸ್. ರೈ, ಅಂಬಿಕಾ ವಿದ್ಯಾಲಯ ಪುತ್ತೂರು. 6 ರಿಂದ 10ನೇ ತರಗತಿ ಪ್ರಥಮ: ನಿಲೀಕ್ಷಾ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ: ವಿಸ್ಮಯ್ ಸುಧಾನ ಪ್ರೌಢ ಶಾಲೆ, ತೃತೀಯ: ನಿನಾದ್ ಕೈರಂಗಳ ಶ್ರೀ ರಾಮ ವಿದ್ಯಾಲಯ ಕಲ್ಲಡ್ಕ ಮತ್ತು ಅವನಿ ಎಸ್ .ವಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ . ಸಮಾಧಾನಕರ ಬಹುಮಾನ: ನಿಧಿ ಕೈರಂಗಳ ಶ್ರೀರಾಮ ವಿದ್ಯಾಲಯ ಕಲ್ಲಡ್ಕ, ಅದ್ವಿತಿ ಎವಿಜಿ ವಿದ್ಯಾಲಯ ಬನ್ನೂರು, ಅನುರಾಗ್ ಜಿ.ರೈ ವಿದ್ಯಾರಶ್ಮಿ ವಿದ್ಯಾಲಯ ಸವಣೂರು, ಶರಣವಿ ಎಸ್ ರೈ ಫಿಲೋಮಿನಾ ಶಾಲೆ ಪುತ್ತೂರು, ಸಹರ್ಷ ವಿ ರೈ ಪ್ರಗತಿ ವಿದ್ಯಾಲಯ ಕಾಣಿಯೂರು, ರೇಷ್ಮಾ ಮಾಯಿದೆ ದೇವುಸ್ ಪುತ್ತೂರು, ಅದ್ವಿತ್ ಜಿ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು, ಕ್ಷಮಾ ಜೆ.ರೈ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಆಯಿಶತ್ ಇಶಾನ ವಿದ್ಯಾರಶ್ಮಿ ವಿದ್ಯಾಲಯ ಸವಣೂರು ಇವರುಗಳು ಬಹುಮಾನ ಪಡೆದುಕೊಂಡರು.

LEAVE A REPLY

Please enter your comment!
Please enter your name here