ಶ್ರೀರಾಮ ಶಾಲೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಠಮಿ ಆಚರಣೆ

0

ಉಪ್ಪಿನಂಗಡಿ: ಉಪ್ಪಿನಂಗಡಿ ಶ್ರೀರಾಮ ವೇದಶಂಕರ ನಗರ ಶಾಲೆಯಲ್ಲಿ ಆ.27ರಂದು ಕೃಷ್ಣ ಜನ್ಮಾಷ್ಠಮಿ ಆಚರಣೆ ಮಾಡಲಾಯಿತು.
ಮಕ್ಕಳಿಂದ ನಿರಂತರವಾಗಿ ಒಂದು ಗಂಟೆಗಳ ಕಾಲ ಭಜನಾ ಸೇವೆ ನಡೆಯಿತು..ಕೃಷ್ಣನ ಬಾಲ ಲೀಲೆಗಳನ್ನು, ಜೊತೆಗೆ, ಅವರು ಸಮಾಜಕ್ಕೆ ನೀಡಿದ ಸಂದೇಶಗಳು, ಪ್ರಸ್ತುತ ಸಮಾಜದಲ್ಲಿ ಅವರ ಆದರ್ಶಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆಗಳ ಬಗ್ಗೆ ಪವಿತ್ರಾ.ಡಿ ಮಾತಾಜಿ ಇವರು ಧಾರ್ಮಿಕ ಉಪನ್ಯಾಸ ನೀಡಿದರು. 9ನೇ ತರಗತಿಯ ಶ್ರೇಯಸ್ ರಾಮ್ ಇವರ ಸಾರಥ್ಯದಲ್ಲಿ ದೇವರಿಗೆ ಮಂಗಳಾರತಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯ ಜಯಂತ ಪೊರೋಳಿ, ಪೋಷಕ ಸಂಘದ ಅಧ್ಯಕ್ಷ ಉದಯ ಅತ್ರಮಜಲು ಮತ್ತು ಪ್ರೌಢವಿಭಾಗದ ಮುಖ್ಯಗುರುಗಳಾದ ರಘುರಾಮ ಭಟ್.ಸಿ ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ಉಪಸ್ಥಿತರಿದ್ದರು. ಸೌಮ್ಯಲತಾ ಇವರು ಸ್ವಾಗತಿಸಿ, ಕು.ಬೇಬಿ ನಿರೂಪಿಸಿ, ಸೌಮ್ಯ ವಂದಿಸಿದರು.

LEAVE A REPLY

Please enter your comment!
Please enter your name here