ಸೆ. 5: ಶಿಕ್ಷಕರ ದಿನಾಚರಣಾ ಅಂಗವಾಗಿ ಸೇವಾ ನಿವೃತ್ತರ ಸಮಾಗಮ, ಅಭಿವಂದನಾ ಕಾರ್ಯಕ್ರಮ

0

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತರ ನೌಕರರ ಸಂಘ ಪುತ್ತೂರು ನೇತೃತ್ವದಲ್ಲಿ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇವರ ಸಹಭಾಗಿತ್ವದಲ್ಲಿ ಶಿಕ್ಷಕರ ದಿನಾಚರಣೆ, ಸೇವಾ ನಿವೃತ್ತರ ಸಮಾಗಮ, ಅಭಿವಂದನಾ ಕಾರ್ಯಕ್ರಮ ಸೆ. 5 ರಂದು ಅಪರಾಹ್ನ ಗಂಟೆ 2.30ಕ್ಕೆ ಪುತ್ತೂರಿನ ರೋಟರಿ ’ಮನಿಷಾ ಸಭಾಂಗಣದಲ್ಲಿ’ ನಡೆಯಲಿದೆ.


ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗ ನಿವೃತ್ತ ವಿಭಾಗೀಯ ಸಹ ನಿರ್ದೇಶಕ ವಾಲ್ಟರ್ ಹೆಚ್ ಡಿ’ಮೆಲ್ಲೊ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೇವಾ ನಿವೃತ್ತಿ ಹೊಂದಿರುವ ಮತ್ತು ಸಂಘಕ್ಕೆ ಸದಸ್ಯತ್ವವನ್ನು ನೋಂದಾಯಿಸಲ್ಪಡದ ನಿವೃತ್ತ ನೌಕರರನ್ನು ನಿವೃತ್ತ ಪ್ರಾಚಾರ್ಯ ಪ್ರೊ ಎ ವಿ ನಾರಾಯಣ ಸನ್ಮಾನಿಸಿ ಗೌರವಿಸಲಿರುವರು.

ನಿವೃತ್ತ ಪ್ರಾಚಾರ್ಯ ಡಾ.ಮಾಧವ ಭಟ್ ಹೆಚ್ ಅಭಿವಂದನಾ ಭಾಷಣ ಮಾಡಲಿರುವರು. ಮುಖ್ಯ ಅಭ್ಯಾಗತರಾಗಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹಾಗೂ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಅಧ್ಯಕ್ಷ ಡಾ. ರವಿಪ್ರಕಾಶ್ ಕಜೆಯವರು ಭಾಗವಹಿಸಲಿರುವರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ ಐತ್ತಪ್ಪ ನಾಯ್ಕ್ ರವರು ವಹಿಸಿಕೊಳ್ಳಲಿರುವರು. ಈಗಾಗಲೇ ಸೇವಾ ನಿವೃತ್ತಿಗೊಂಡು ಸಂಘದ ಸದಸ್ಯತನವನ್ನು ಹೊಂದಿರದ ನಿವೃತ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿವಂದನೆಯನ್ನು ಸ್ವೀಕರಿಸುವಂತೆ ಸಂಘದ ಅಧ್ಯಕ್ಷ ಬಿ ಐತ್ತಪ್ಪ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here