ವಾಲಿಬಾಲ್- ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಅರಿಯಡ್ಕ: ಮುಂಡೂರು ಪಂಜಳ ಶಾಂತಿ ಗಿರಿ ವಿದ್ಯಾನಿಕೇತನ ಶಾಲೆ ಇಲ್ಲಿ ಆ.27ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

ಇವರಿಗೆ ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣ ರೈ ಇವರು ತರಬೇತಿ ನೀಡಿರುತ್ತಾರೆ. ಬೆಸ್ಟ್ ಅಟ್ಯಾಕರ್ ಆಗಿ ಸಿಂಚನ, ಬೆಸ್ಟ್ ಪಾಸರ್ ಆಗಿ ಲಾಸ್ಯ ಆಯ್ಕೆ ಆಗಿದ್ದಾರೆ . ಖುಷಿ, ಶಿಫಾಲಿ, ಯಶಸ್ವಿನಿ, ಹರ್ಷಿಣಿ, ಮತ್ತು ಚೈತನ್ಯ ತಂಡದಲ್ಲಿದ್ದ ಇತರೆ ಸದಸ್ಯರು.ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಎಂ ಮತ್ತು ಶಿಕ್ಷಕ ವೃಂದ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಕುಮಾರ್ ಮರತ್ತ ಮೂಲೆ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here