ಆ . 31ರಂದು KSRTC ಸಹಾಯಕ ಭದ್ರತಾ ನಿರೀಕ್ಷಕ ಧನಂಜಯ ನಾಡಾಜೆ ಸೇವಾ ನಿವೃತ್ತಿ

0

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಳೆದ 39 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಮುಂಡೂರು ಗ್ರಾಮದ ನಾಡಾಜೆ ನಿವಾಸಿ ಧನಂಜಯ ನಾಡಾಜೆ ಆ.31 ರಂದು ನಿವೃತ್ತಿಯಾಗಲಿದ್ದಾರೆ.


ಇವರು 2-6-1986ರಲ್ಲಿ ಕೆಎಸ್‌ಆರ್‌ಟಿಸಿಯ ಮಂಗಳೂರು ವಿಭಾಗದಲ್ಲಿ ಸೇವೆಗೆ ಸೇರ್ಪಡೆಗೊಂಡು ಬಳಿಕ ಪುತ್ತೂರು,ಮಡಿಕೇರಿ ,ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಪುತ್ತೂರು ವಿಭಾಗದಲ್ಲಿ ಸಹಾಯಕ ಭದ್ರತಾ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಇವರು ಪತ್ನಿ ನಿವೃತ್ತ ಪೋಸ್ಟ್ ಮಾಸ್ಟರ್ ಶಶಿಕಲಾ, ಪುಣೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿರುವ ಅಕ್ಷತಾ,ಭಾರತ್ ಮೋಟಾರ್‍ಸ್ ಪುತ್ತೂರಿನಲ್ಲಿ ಟೀಮ್ ಮ್ಯಾನೇಜರ್ ಆಗಿರುವ ಪುತ್ರ ಅಶಿತ್ ರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here