ಬಂಟರ ಪಡುವನ್ನೂರು ಗ್ರಾಮ ಸಮಿತಿ ರಚನೆ

0

ಪುತ್ತೂರು: ಬಂಟರ ಸಂಘ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಎ ಹೇಮನಾಥ ಶೆಟ್ಟಿ ಕಾವು ಇವರ ಅಧ್ಯಕ್ಷತೆಯಲ್ಲಿ ಆ. 25 ರಂದು ಕುದ್ಕಾಡಿ ಪುರಂದರ ರೈ ಯವರ ಆತಿಥ್ಯದಲ್ಲಿ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಬಂಟರ ಪಡುವನ್ನೂರು ಗ್ರಾಮ ಸಮಿತಿ ರಚನೆ ಮಾಡಲಾಯಿತು.


ಅಧ್ಯಕ್ಷರಾಗಿ ರವಿರಾಜ್ ರೈ ಸಜಂಕಾಡಿ, ಕಾರ್ಯದರ್ಶಿಯಾಗಿ ಶಶಿಧರ್ ರೈ ಕುತ್ಯಾಳ, ಕೋಶಾಧಿಕಾರಿಯಾಗಿ ಕುದ್ಕಾಡಿ ಪುರಂದರ ರೈ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಂಟ ಸಮಾಜದ ಹಿರಿಯರಾದ ಕುದ್ಕಾಡಿ ಬಾಲಕೃಷ್ಣ ರೈ, ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ದುರ್ಗಾಪ್ರಸಾದ್ ರೈ ‌ಕುಂಬ್ರ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಮಾತೃ ಸಂಘದ ನಿರ್ದೇಶಕರಾದ ಜಯಪ್ರಕಾಶ್ ರೈ ನೂಜಿಬೈಲು, ವಾಣಿ ಎಸ್ ಶೆಟ್ಟಿ, ಮಹಿಳಾ ಬಂಟರ ವಿಭಾಗ ದ ಅಧ್ಯಕ್ಷರಾದ ಗೀತಾ ಮೋಹನ್ ರೈ, ಕೋಶಾಧಿಕಾರಿ ಅರುಣಾ ದಿನಕರ್ ರೈ, ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಉಪಸ್ಥಿತರಿದ್ದರು.


ತಾಲೂಕು ಸಂಘದ ನಿರ್ದೇಶಕ ಸತೀಶ್ ರೈ ಕಟ್ಟಾವು ಸ್ವಾಗತಿಸಿ. ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಕುದ್ಕಾಡಿ ರಘನಾಥ ರೈ, ಕುದ್ಕಾಡಿ ಪುರಂದರ ರೈ ಮತ್ತು ಮನೆಯವರು ಅತಿಥಿಗಳನ್ನು ಗೌರವಿಸಿದರು.

LEAVE A REPLY

Please enter your comment!
Please enter your name here