ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ ಸಹಿತ 9 ಮಂದಿಗೆ ಬೀಳ್ಕೊಡುಗೆ

0

ಪುತ್ತೂರು: ವರ್ಗಾವಣೆಗೊಂಡ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ ಅವರಿಗೆ ಮತ್ತು 8 ಮಂದಿ ಸಿಬ್ಬಂದಿಗಳಿಗೆ ಹಾಗು ನಿವೃತ್ತಿಗೊಂಡ ಎ.ಎಸ್.ಐ ಓರ್ವರಿಗೆ ಪುತ್ತೂರು ಪೊಲೀಸರಿಂದ ಬೀಳ್ಕೊಡುಗೆ ಕಾರ್ಯಕ್ರಮ ಬ್ರಹ್ಮಶ್ರೀ ನಾರಾಯಣ ಬಿಲ್ಲವ ಸಭಾಭವನದಲ್ಲಿ ಆ.30ರಂದು ನಡೆಯಿತು.


ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಚುನಾವಣೆ ಕರ್ತವ್ಯದ ಸಂದರ್ಭ ಆಗಮಿಸಿದ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ ಅವರಿಗೆ ಇದೀಗ ವರ್ಗಾವಣೆ ಆದೇಶ ಬಂದ ಹಿನ್ನೆಲೆಯಲ್ಲಿ ಅವರನ್ನು ಬೀಳ್ಕೊಡಲಾಯಿತು. ಅದೇ ರೀತಿ ಪುತ್ತೂರು ನಗರ, ಸಂಚಾರ ಮತ್ತು ಮಹಿಳಾ, ಡಿವೈಎಸ್ಪಿ ಕಚೇರಿಯಿಂದ ಬೇರೆ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಂಡ ರೇಖಾ, ಶಿವಪ್ರಸಾದ್, ಕಾಶಿಬಾಯಿ, ವಿರೂಪಾಕ್ಷ, ಮಾರುತಿ, ಯುವರಾಜ್, ಡಿವೈಎಸ್ಪಿ ಕಚೇರಿಯಲ್ಲಿದ್ದ ವಿಶ್ವನಾಥ, ಲಕ್ಷ್ಮೀನಾರಾಯಣ ಅವರನ್ನು ಬೀಳ್ಕೊಡಲಾಯಿತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐಆಗಿ ನಿವೃತ್ತಿ ಹೊಂದುತ್ತಿರುವ ಧರ್ಮಪಾಲ ಅವರನ್ನು ಸನ್ಮಾನಿಸಲಾಯಿತು. ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಉದಯರವಿ ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here