ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯ

0

ಬಡವರಿಗೆ ಸರಕಾರಿ ಸೌಲಭ್ಯ ಒದಗಿಸಲು ಕಟಿಬದ್ಧ ಶಾಸಕ ರೈ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಇಬ್ಬರು ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವಿನ ಚೆಕ್ ವಿತರಣೆ ನಡೆಯಿತು. ಪುತ್ತೂರು ಶಾಸಕರಾದ ಅಶೋಕ್ ರೈ ಶಿಫಾರಸ್ಸಿನಂತೆ ಆರ್ಯಾಪು ಗ್ರಾಮದ ಕುಕ್ಕಾಡಿ ಮನೆ ನಿವಾಸಿ ಪ್ರಿಯಾ ಎಂಬವರಿಗೆ 75,240 ರೂ ಮತ್ತು ಬಡಗನ್ನೂರು ಗ್ರಾಮದ ಬನಪದವು ನಿವಾಸಿ ಕಮಲ ಎಂಬವರ 20 ಸಾವಿರ ಪರಿಹಾರದ ಚೆಕ್ ವಿತರಣೆ ನಡೆಯಿತು.

ಚೆಕ್ ವಿತರಣೆ ಮಾಡಿ ಮಾತನಾಡಿದ ಶಾಸಕ ಅಶೋಕ್ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸಿಎಂ ಪರಿಹಾರ ನಿಧಿಗೆ ಅನೇಕ ಅರ್ಜಿಗಳು ಬಂದಿದೆ. ಹಂತ ಹಂತವಾಗಿ ಅರ್ಜಿಗಳ ವಿಲೇವಾರಿ ನಡೆಸಲಾಗುತ್ತದೆ. ಬಡವರಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here