ರಾಮಕುಂಜ-ಗೋಳಿತ್ತಡಿ ಸಮೃದ್ಧಿ ಜನರಲ್ ಸ್ಟೋರ್‌ನ ಬಾಲಕೃಷ್ಣ ನೇಕಾರ ನಿಧನ

0


ರಾಮಕುಂಜ: ರಾಮಕುಂಜ ಗ್ರಾಮದ ಗೋಳಿತ್ತಡಿ ಶಾರದಾನಗರ ನಿವಾಸಿ ಬಾಲಕೃಷ್ಣ ನೇಕಾರ(73ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಸೆ.5ರಂದು ಬೆಳಿಗ್ಗೆ ಉಳ್ಳಾಲದ ಸಹರಾ ಆಸ್ಪತ್ರೆಯಲ್ಲಿ ನಿಧನರಾದರು.


ಮೂಲತ: ಉಜಿರೆ ನಿವಾಸಿಯಾಗಿದ್ದ ಬಾಲಕೃಷ್ಣ ನೇಕಾರ ಅವರು ಕಳೆದ 13 ವರ್ಷಗಳಿಂದ ರಾಮಕುಂಜ ಗ್ರಾಮದ ಗೋಳಿತ್ತಡಿ-ಶಾರದಾನಗರದಲ್ಲಿ ವಾಸ್ತವ್ಯವಿದ್ದರು. ಇವರು ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಸಮೃದ್ಧಿ ಜನರಲ್ ಸ್ಟೋರ್ ಹೊಂದಿದ್ದು ದಿನಸಿ ಸಾಮಾಗ್ರಿಗಳ ಮಾರಾಟ ಮಾಡುತ್ತಿದ್ದರು. 1 ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಬಾಲಕೃಷ್ಣ ನೇಕಾರ ಅವರು ಇತ್ತೀಚಿನ 1 ತಿಂಗಳಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಉಳ್ಳಾಲದ ಸಹರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಉಸಿರಾಟದ ತೊಂದರೆಯಿಂದಾಗಿ ಸೆ.5ರಂದು ಬೆಳಿಗ್ಗೆ ನಿಧನರಾದರು ಎಂದು ವರದಿಯಾಗಿದೆ. ಮೃತರು ಪತ್ನಿ ವಸಂತಿ, ಪುತ್ರಿಯರಾದ ಪುಷ್ಪಲತಾ, ಶಾಲಿನಿ, ಮೂವರು ಸಹೋದರರು, ಇಬ್ಬರು ಸಹೋದರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here