ಇಳಂತಿಲ:SYS ಕನ್ಯಾರಕೋಡಿ ಸಾಂತ್ವನ ಹಾಗೂ ಇಸಾಬ ಟೀಮ್ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಉಪ್ಪಿನಂಗಡಿ: ಇಳಂತಿಲ ಗ್ರಾಮ ಪಂಚಾಯತ್ 1 ನೇ ವಾರ್ಡ್ ಕಾಯರ್ಪಾಡಿಯಿಂದ ಕನ್ಯಾರಕೋಡಿಗೆ ಹೋಗುವ ರಸ್ತೆ ದುರಸ್ತಿ ಹಾಗೂ ಚರಂಡಿ ಬದಿ ಸ್ವಚ್ಛತೆ ಮಾಡಿಕೊಡುವಂತೆ ಇಳಂತಿಲ ಗ್ರಾಮ ಪಂಚಾಯತಿಗೆ ಅರ್ಜಿ ಕೊಟ್ಟರೂ ಯಾವುದೇ ಸ್ಪಂದನೆ ಸಿಗದ ಕಾರಣ SYS ಕನ್ಯಾರಕೋಡಿ ಸಾಂತ್ವನ ಹಾಗೂ ಇಸಾಬ ಟೀಮ್ ನೇತೃತ್ವದಲ್ಲಿ ಕನ್ಯಾರಕೋಡಿಯಿಂದ ಕಾಯರ್ಪಾಡಿ ಕಡೆಗೆ ಹೋಗುವ ರಸ್ತೆ ಬದಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.

SYS ಅಧ್ಯಕ್ಷ ಮುಸ್ತಫ ಕನ್ಯಾರ ಕಾರ್ಯದರ್ಶಿ ರಜಾಕ್ ಕನ್ಯಾರ ಇಸಾಬ ಕಾರ್ಯದರ್ಶಿ ಲತೀಫ್ ಕನ್ಯಾರ ಸಾಂತ್ವನ ಕಾರ್ಯದರ್ಶಿ ಕಾಸಿಂ ಕೊಯಕೊಡೆ ಮತ್ತು ಸದಸ್ಯರಾದ ಇಬ್ರಾಹಿಂ ನಜೀರ್ ಕೆ, ಶರೀಫ್ ಕೆ, ಅಬೂಬಕ್ಕರ್ ಏ ಕೆ, ಹಮೀದ್ ಅನ್ಸಾರ್ ,ಸಿರಾಜುದ್ದಿನ್ ಮದನಿ, ರಿಯಾಜ್, ಜಮಾಅತ್ ಕಾರ್ಯದರ್ಶಿ ಹಾಗೂ ಊರಿನ ಪ್ರಮುಖರು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

LEAVE A REPLY

Please enter your comment!
Please enter your name here