ಗಣೇಶ ಚತುರ್ಥಿ ಪ್ರಯುಕ್ತ ʼವಸ್ತ್ರ ಮನೆʼ ಮಳಿಗೆಯಲ್ಲಿ ವಿಶೇಷ ರಿಯಾಯಿತಿ-ಇಂದು(ಸೆ.7) ಕೊನೆ

0

ಪುತ್ತೂರು : ಜವುಳಿ ವ್ಯವಹಾರದಲ್ಲಿ 35 ವರ್ಷಗಳ ಅನುಭವದ ಜೊತೆಗೆ ಸ್ವತಃ ವಸ್ತ್ರ ಮನೆ ಮಿಲ್ ನಲ್ಲಿ ತಯಾರಾದಂತಹ ಯುವ ಜನತೆಯ ಸಹಿತ ಮಹಿಳೆಯರ ಮತ್ತು ಪುರುಷರ ಎಲ್ಲಾ ಬಗೆಯ ರೆಡಿಮೇಡ್ ಬಟ್ಟೆಗಳ ಮಾರಾಟ ಮಳಿಗೆ, ಇಲ್ಲಿನ ಪಂಜ ಪೇಟೆ ಮತ್ತು ಪುತ್ತೂರಿನ ರಮಾನಾಥ ಛೇಂಬರ್ಸ್ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ʼವಸ್ತ್ರ ಮನೆʼ ಮಳಿಗೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಎಲ್ಲಾ ರೀತಿಯ ಬಟ್ಟೆ ಖರೀದಿಗೆ ವಿಶೇಷ ಕೊಡುಗೆ ಪ್ರಾರಂಭಗೊಂಡಿದ್ದು ಸೆ.7 ರಂದು ಕೊನೆಯಾಗಲಿದೆ.


ಯುವ ಜನತೆಯ ಟ್ರೇಂಡಿವೇರ್ ಗಳು, ಮಹಿಳೆಯರ ಮೆಚ್ಚಿನ ಸೀರೆಗಳು ಜತೆಗೆ ಪುರುಷರ ಉಡುಗೆಗಳು ಅತ್ಯುತ್ತಮ ಬೆಲೆಗೆ ಸಿಗಲಿವೆ.
ಅತೀ ಕಡಿಮೆ ಲಾಭಂಶದೊಂದಿಗೆ, ಗುಣಮಟ್ಟದ ಬಟ್ಟೆಗಳೆಲ್ಲಾ ಮಳಿಗೆಯಲ್ಲಿ ಲಭ್ಯವಿದ್ದು , ಮಳಿಗೆಯಿಂದ ಹೋಲ್ ಸೇಲ್ ದರದಲ್ಲೂ ಬಟ್ಟೆಗಳು ಗ್ರಾಹಕರು ಮತ್ತು ಮಾರಾಟಗಾರರಿಗೂ ಕೂಡ ಸದಾ ಲಭ್ಯವಿದೆ.


ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾಗುವಂತಹ ವಿವಿಧ ಬಣ್ಣಗಳ ಬಟ್ಟೆಗಳು, ಪುರೋಹಿತ ವರ್ಗಕ್ಕೆ ಬೇಕಾಗುವ ಪ್ಯೂರ್ ಕಾಟನ್ ಬಟ್ಟೆಗಳು , ಸೊಲಾಪುರ್ ಚಾದರ್ ಸಹಿತ ಹಲವು ಮಾದರಿಯ ತೊಡುಗೆಗಳೆಲ್ಲಾ ಊಹಿಸಿರಲಾರದ ಬೆಲೆಗೆ ಸಿಗಲಿವೆ. ಬಾಂಬೆ, ಸೂರತ್ ಮತ್ತು ಅಹಮದಾಬಾದ್ ನಗರದಲ್ಲೂ ವಸ್ತ್ರ ಮನೆ ಮಳಿಗೆಯ ಶಾಖೆ ವ್ಯವಹಾರವನ್ನು ಹೊಂದಿದೆ. ಇದೀಗ ಪಂಜ ಮತ್ತು ಪುತ್ತೂರಿನ ತನ್ನ ಸಂಸ್ಥೆಯಲ್ಲಿ ವಿಶೇಷ ರಿಯಾಯಿತಿ ಕೊಡುಗೆ ಏರ್ಪಡಿಸಿದ್ದು, ಗ್ರಾಹಕರು ಈ ಕೊಡುಗೆಗಳ ಲಾಭ ಪಡೆಯುವಂತೆ ಮಾಲೀಕರು ವಿನಂತಿಸಿದ್ದಾರೆ.

ಅತೀ ಕಡಿಮೆ ಲಾಭಾಂಶದೊಂದಿಗೆ ವ್ಯವಹರಿಸುತ್ತಿರುವ ಮಳಿಗೆಯಲ್ಲಿ ಹುಡುಗರ ಶಾರ್ಟ್ಸ್ 3ಕ್ಕೆ ರೂ.99, ಬರ್ಮುಡಾ ಶಾರ್ಟ್ಸ್ 3 ಕ್ಕೆ ರೂ.99 , ನೈಟಿ ರೂ.124 ರಿಂದ , ಫ್ಯಾನ್ಸಿ ಸಾರಿ ರೂ. 168 ರಿಂದ ,ಲುಂಗಿಗಳು ರೂ.83 ರಿಂದ ,ಟಾಪ್ ಗಳು ರೂ.188 ರಿಂದ ಲಭ್ಯವಿದ್ದು , ಎಲ್ಲಾ ರೀತಿಯ ಖರೀದಿಗೂ 10% ವಿಶೇಷ ರಿಯಾಯಿತಿಯೂ ಇದೆ.

LEAVE A REPLY

Please enter your comment!
Please enter your name here