ಬಲ್ನಾಡು ವಲಯದಲ್ಲಿ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರ

0

ಪುತ್ತೂರು: ಬಲ್ನಾಡು ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಕುಂಜೂರುಪಂಜ ದೇವಸ್ಯ ಶ್ರೀ ಮಂಜುನಾಥ ಸಭಾಭವನದಲ್ಲಿ ಸೆ.7ರಂದು ತಾಲೂಕಿನ ಯೋಜನಾಧಿಕಾರಿ, ಒಕ್ಕೂಟದ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವಲಯಾಧ್ಯಕ್ಷರಾದ ಸತೀಶ್ ಗೌಡ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.


ನಂತರ ತಾಲೂಕಿನ ಯೋಜನಾಧಿಕಾರಿ ತರಬೇತಿ ನೀಡಿ, ಒಕ್ಕೂಟದ ನಿರ್ವಹನೆ,ಮಾಸಿಕ ವರದಿಗಳ ಪರಿಶೀಲನೆ ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಬಡ್ಡಿಲೆಕ್ಕಾಚಾರ ವಿಧಾನ, ಮರುಪಾವತಿ ಚೀಟಿ, ದಾಖಲಾತಿ ನಿರ್ವಹನೆ, ಲೆಕ್ಕಪರಿಶೋಧನೆ ಕುರಿತಾಗಿ ತಾಲೂಕಿನ ವಿಚಕ್ಷಣಾಧಿಕಾರಿಯಾದ ಲತಾ ಮಾಹಿತಿ ನೀಡಿದರು. ನಂತರದ ತರಬೇತಿಯಲ್ಲಿ ಮಾನ್ಯ ಜಿಲ್ಲಾ ನಿರ್ದೇಶಕರು ಮಾತನಾಡುತ್ತಾ, ನಮ್ಮ ತಂದೆ ತಾಯಿಯವರು ಜೀವನ ನಡೆಸುತ್ತಿದ್ದ ರೀತಿ ಬದುಕಿನಲ್ಲಿ, ಎದುರಿಸುತ್ತಿದ್ದ ಕಷ್ಟದ ದಿನಗಳಲ್ಲಿ ಒಂದು ಹೊತ್ತಿನ ಊಟ, ಒಳ್ಳೆಯ ಬಟ್ಟೆ ಪಡೆದುಕೊಳ್ಳಲು ಅಸಾಧ್ಯವಾದ ದಿನಗಳ ಸಂದರ್ಭದಲ್ಲಿ, ಪೂಜ್ಯ ಖಾವಂದರರು ಹುಟ್ಟು ಹಾಕಿದ ಗ್ರಾಮಾಭಿವೃದ್ಧಿ ಯೋಜನೆಯು ನಮ್ಮ ಪಾಲಿಗೆ ಬೆಳಕಾಗಿ ಬಂತು. ಇದರಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಯಿತು. ಯೋಜನೆಯ ಕಾರ್ಯಕ್ರಮಗಳ ಪಾರದರ್ಶಕತೆಗೆ ಕೈಗನ್ನಡಿಯಾಗಿ ಇರುವ ಎಲ್ಲಾ ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ಮಾರ್ಗದರ್ಶನ ನೀಡಿದರು.

ಒಕ್ಕೂಟದ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಮತ್ತು ವಲಯದ ಎಲ್ಲಾ ಪದಾಧಿಕಾರಿಗಳು ವಲಯದ ಸಾಧನೆಗೆ ಸಹಕಾರ ನೀಡುವಂತೆ ಸಲಹೆ ನೀಡಿದರು. ಬೆಳಿಯೂರು ಕಟ್ಟೆ ಸೇವಾಪ್ರತಿನಿಧಿ ಇಗ್ನೇಶಿಯಸ್ ಡಿಸೋಜಾ ಸ್ವಾಗತಿಸಿದರು. ಕುಂಜೂರುಪಂಜ ಸೇವಾ ಪ್ರತಿನಿಧಿ ಆಶಾಲತಾ ವಲಯದ 2023/24 ನೇ ಸಾಲಿನ ಸಾಧನಾ ವರದಿಯನ್ನು ವಾಚಿಸಿದರು. ದೊಡ್ಡಡ್ಕ ಒಕ್ಕೂಟ ಸೇವಾಪ್ರತಿನಿಧಿ ಪ್ರಮೀಳಾ ಕುಮಾರಿ ಧನ್ಯವಾದ ಸಲ್ಲಿಸಿ, ವಲಯ ಮೇಲ್ವಿಚಾರಕರು ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿಯಲ್ಲಿ 11 ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಸೇವಾಪ್ರತಿನಿಧಿಯವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here