ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ದ್ವಿತೀಯ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಭಾ ಕಾರ್ಯಕ್ರಮ-ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಅವರಿಗೆ ಅಭಿನಂದನೆ

0

ಪುತ್ತೂರು : ಸರ್ವೆ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ಶ್ರೀ ದುರ್ಗಾಪೂಜೆ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.6 ಮತ್ತು ಸೆ.7ರಂದು ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ಮಾರ್ಗದರ್ಶನದಲ್ಲಿ ದೇವಸ್ಥಾನದ ಅರ್ಚಕ ಶ್ರೀರಾಮ ಕಲ್ಲೂರಾಯ ಅವರ ನೇತೃತ್ವದಲ್ಲಿ  ಸಂಭ್ರಮ ಸಡಗರದಿಂದ  ನಡೆಯಿತು.

ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಸರಕಾರದಿಂದ ನಾಮ ನಿರ್ದೇಶನಗೊಂಡ ಸರ್ವೆ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶಿವನಾಥ ರೈ ಮೇಗಿನಗುತ್ತು ಅವರನ್ನು ಪತ್ನಿ ರಸಿಕಾ ರೈ ,ಪುತ್ರಿ ರಾಶಿ ರೈ ಅವರೊಂದಿಗೆ ದೇವಸ್ಥಾನದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಯಲಕ್ಷ್ಮಿ ರೈ ಅಲೇಕಿ ಬೆಂಗಳೂರು ,ಶ್ರೀಗಣೇಶೋತ್ಸವ  ಸಮಿತಿಯ ಗೌರವಾಧ್ಯಕ್ಷ ಹಾಗೂ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರಸಾದ್‌ ರೈ ಸೊರಕೆ,ಮುಂಡೂರು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಎನ್.ಎಸ್.ಡಿ ,ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ರೈ ಸರ್ವೆ ,ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೌಡ ತಂಬುತ್ತಡ್ಕ,ಗೌರವ ಸಂಚಾಲಕರಾದ ಆನಂದ ಪೂಜಾರಿ ಸರ್ವೆದೋಳಗುತ್ತು , ವಿಜಯಕುಮಾ‌ರ್ ರೈ ಸರ್ವೆ ಬೆಂಗಳೂರು,ಕಾರ್ಯಾಧ್ಯಕ್ಷರಾದ  ಆನಂದ ಭಂಡಾರಿ ಸೊರಕೆ, ಶಶಿಧರ ಎಸ್. ಡಿ. ಸರ್ವೆದೋಳಗುತ್ತು, ಉಪಾಧ್ಯಕ್ಷರಾದ ಬಾಲಚಂದ್ರ ಶೆಟ್ಟಿ ಸೊರಕೆ, ರಾಮಕೃಷ್ಣ ಎಸ್. ಡಿ. ಸರ್ವೆದೋಳಗುತ್ತು ,ಪುರಂದರ ರೈ ರೆಂಜಲಾಡಿ, ಸುರೇಶ್ ಎಸ್. ಡಿ. ಸರ್ವೆದೋಳಗುತ್ತು ,ಲಕ್ಷ್ಮೀಶ ರೈ ಸರ್ವೆ, ,ತಿಲಕ್‌ ರಾಜ್ ಕರುಂಬಾರು, ಅನೀಶ್ ಕಲ್ಲಮೆಟ್ಟು,ಕಾರ್ಯದರ್ಶಿಗಳಾದ ಗೌತಮ್ ರೈ ಸರ್ವೆ, ರಿತೇಶ್ ರೈ ಬಾವ,ಜೊತೆ ಕಾರ್ಯದರ್ಶಿಗಳಾದ ಅಶೋಕ್ ನಾಯ್ಕ ಸೊರಕೆ, ಕಿರಣ್ ಎಸ್. ಡಿ. ಸರ್ವೆದೋಳಗುತ್ತು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here