ಉಪ್ಪಿನಂಗಡಿ: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0

ಉಪ್ಪಿನಂಗಡಿ: ಬಿಜೆಪಿ ಮಹಾಶಕ್ತಿ ಕೇಂದ್ರ ಉಪ್ಪಿನಂಗಡಿ ಇದರ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ ಸಂಗಮ ಕೃಪಾ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.


ಮಹಾಶಕ್ತಿ ಕೇಂದ್ರದ ಉಸ್ತುವಾರಿಯಾಗಿ ಸುಳ್ಯದಿಂದ ಆಗಮಿಸಿದ ಸಂತೋಷ್ ಕುತ್ತಮೊಟ್ಟೆ ಸದಸ್ಯತ್ವ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದರು. ಮಾಜಿ ಶಾಸಕ ಸಂಜೀವ ಮಠಂದೂರು ಸಲಹೆ ನೀಡಿದರು. ಈ ಸಂದರ್ಭ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಶ್ ಅತ್ರಮಜಲು, ಮುಕುಂದ ಬಜತ್ತೂರು, ಕಾರ್ಯದರ್ಶಿ ಮೋಹನ್ ಪಕ್ಕಳ, ಮಂಡಲ ಉಪಾಧ್ಯಕ್ಷ ವಿದ್ಯಾಧರ ಜೈನ್, ಜಯಂತ್ ಪೋರೋಳಿ ,ಗಂಗಾಧರ ಪಿ.ಎನ್, ಪ್ರಸಾದ್ ಭಂಡಾರಿ, ರಾಮಚಂದ್ರ ಪೂಜಾರಿ ಬೆಳ್ಳಿಪ್ಪಾಡಿ, ಪ್ರವೀಣ್, ಸದಾನಂದ ಶೆಟ್ಟಿ ಹಿರೆಬಂಡಾಡಿ, ಸುಜಾತ ಆರ್. ರೈ, ಧನಂಜಯ ನಟ್ಟಿಬೈಲ್, ಸಚಿನ್ ಮುದ್ಯ ಸೇರಿದಂತೆ ಆರು ಗ್ರಾಮಗಳ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here