ಆಲಂಕಾರು ಬಿ.ಜೆ.ಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಜಯಕರ ಪೂಜಾರಿ ಆಲಂಕಾರು ಆಯ್ಕೆ

0

ಆಲಂಕಾರು: ಆಲಂಕಾರು ಬಿ.ಜೆ.ಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಕೆ.ಜಯಕರ ಪೂಜಾರಿ ಆಲಂಕಾರು ಆಯ್ಕೆಯಾಗಿದ್ದಾರೆ.ಜಯಕರ ಪೂಜಾರಿ ಆಲಂಕಾರು ಗ್ರಾಮದ ಕಲ್ಲೇರಿಯ ನಿವಾಸಿಯಾಗಿದ್ದು ಆಲಂಕಾರು ಗ್ರಾ.ಪಂ ನ ಅಧ್ಯಕ್ಷರಾಗಿ,ಹಿಂದೂ ಜಾಗರಣಾ ವೇದಿಕೆ ಆಲಂಕಾರು ಘಟಕದ ಸ್ಥಾಪಕ ಸಂಚಾಲಕರಾಗಿ,ಆಲಂಕಾರು ಸಿ.ಎ ಬ್ಯಾಂಕ್ ನಿರ್ದೇಶಕರಾಗಿ,ಮೂರ್ತೆದಾರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ, ಎಂಡೋ ಸಲ್ಪಾನ್ ವಿರೋಧಿ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ, ಬಿ.ಜೆ.ಪಿ ಜಿಲ್ಲಾ ಯುವಮೋರ್ಚದ ಜಿಲ್ಲಾ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಆಲಂಕಾರು ಬಿ.ಜೆ.ಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಕೆ.ಜಯಕ ಪೂಜಾರಿ ಕಲ್ಲೇರಿ ಆಯ್ಕೆಯಾಗಿದ್ದಾರೆ.

ಹಾಗು ಆಲಂಕಾರು ಶಕ್ತಿ ಕೇಂದ್ರದ ನಾಲ್ಕು ಬೂತ್ ಸಮಿತಿಯ ಅಧ್ಯಕ್ಷರಾಗಿ ಶೀನಪ್ಪ ಕುಂಬಾರ ಕೊಂಡಾಡಿ ಕೊಪ್ಪ,ದಯಾನಂದ ಗೌಡ ಬಡ್ಡಮೆ,ಬಾಸ್ಕರ ಗೌಡ ಶರವೂರು, ಜನಾರ್ದನ ದೇವಾಡಿಗ ನಡುಗುಡ್ಡೆ,ಕಾರ್ಯದರ್ಶಿಯಾಗಿ ಶಶಿಧರ ನೆಕ್ಕಿಲಾಡಿ,ಧರ್ಮಯ್ಯ ಗೌಡ ಪಲ್ಲತ್ತಡ್ಕ,ಮನೋಹರ ಗೌಡ ಕಕ್ವೆ,ಕಾರ್ತಿಕ್ ಮಡಿವಾಳ ಮಡ್ಯೋಟ್ಟು ರವರು ಆಯ್ಕೆಯಾಗಿದ್ದಾರೆ ಎಂದು ಬಿ.ಜೆ.ಪಿ ಸುಳ್ಯಮಂಡಲ ಸಮಿತಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here