ಕೆದಂಬಾಡಿ 185 ಬೂತ್ ನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ 

0

ಪುತ್ತೂರು: ಬಿಜೆಪಿ ಕೆದಂಬಾಡಿ 185 ಬೂತ್ ಸಮಿತಿ ಸಭೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಯಿತು. ಸಭೆಯು ಬೂತ್ ಅಧ್ಯಕ್ಷೆ ವೀಣಾ ಆರ್ ರೈ ಇವರ ಅಧ್ಯಕ್ಷತೆಯಲ್ಲಿ ಬೆದ್ರುಮಾರು ನಿವಾಸದಲ್ಲಿ ನಡೆಯಿತು. ಬೂತ್ ಸದಸ್ಯತ್ವ ಅಭಿಯಾನದ ಸಂಯೋಜಕರಾಗಿ ಜಗನ್ನಾಥ ರೈ ಮನವಳಿಕೆ ಹಾಗೂ ಸಹ ಸಂಯೋಜಕರಾಗಿ ಪದ್ಮನಾಭ ಗೌಡ ಮುಂಡಾಲ ಆಯ್ಕೆಯಾದರು. ಸಭೆಯಲ್ಲಿ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಶಕ್ತಿಕೇಂದ್ರ ಸಂಚಾಲಕರಾಗಿ ಶರತ್ ಗೌಡ ಕೃಷಿಕ ಸಮಾಜದ ಅಧ್ಯಕ್ಷರಾದ ವಿಜಯ ಕುಮಾರ್ ರೈ ಕೋರಂಗ, ಕರುಣಾಕರ ರೈ ಅತ್ರೇಜಾಲು, ರಾಧಾಕೃಷ್ಣ ಪೂಜಾರಿ ಇಡ್ಪಾಡಿ ಉಪಸ್ಥಿತರಿದ್ದರು. ಬೂತ್ ಕಾರ್ಯದರ್ಶಿ ಕೃಷ್ಣ ಕುಮಾರ್ ಇದ್ಯಪ್ಪೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here