ಕಡಬ: ಉನ್ನತ ಶಿಕ್ಷಣಕ್ಕಾಗಿ ಕ್ಯಾಂಪ್ಕೋ ಸಂಸ್ಥೆಯಿಂದ ಧನ ಸಹಾಯ

0

ಕಡಬ: ಕ್ಯಾಂಪ್ಕೋ ನಿಯಮಿತ ಮಂಗಳೂರು, ಸಂಸ್ಥೆಯಿಂದ ಸದಸ್ಯ ಬೆಳೆಗಾರರಿಗಾಗಿ ರೂಪಿಸಲಾದ ವಿವಿಧ ಸಹಾಯಧನ ಯೋಜನೆಗಳಡಿಯಲ್ಲಿ ಸಂಸ್ಥೆಯ ಸಕ್ರಿಯ ಸದಸ್ಯರ ಕುಟುಂಬದವರ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ಒಂದು ಲಕ್ಷ ರೂಪಾಯಿ ಮೊತ್ತದ ಸಹಾಯಧನದ ಮೊದಲನೇ ಕಂತು ರೂ. ಐವತ್ತು ಸಾವಿರ ರೂಪಾಯಿಯನ್ನು ಕ್ಯಾoಪ್ಕೋ ಸಂಸ್ಥೆಯ ಕಡಬ ಶಾಖೆಯ ಸದಸ್ಯ ಜಯಚಂದ್ರ ರೈ ಅವರ ಪುತ್ರಿ ಕು.ಶ್ರೇಯಾ ಅವರ M.Sc(Hort.)Plantetion,Spices,Medicinal & Aromatic Crops ಶಿಕ್ಷಣಕ್ಕಾಗಿ ಸೆ. 2024ರಂದು ಕ್ಯಾಂಪ್ಕೋ ಕಡಬ ಶಾಖೆಯಲ್ಲಿ ಸಂಸ್ಥೆಯ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ ಅವರು ಜಯಚಂದ್ರ ರೈ ಅವರಿಗೆ ಹಸ್ತಾoತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಪುತ್ತೂರು ಪ್ರಾದೇಶಿಕ ಪ್ರಭಂಧಕ ಪ್ರಕಾಶ್ ಕುಮಾರ್ ಕೆ ಶೆಟ್ಟಿ, ಕ್ಯಾಂಪ್ಕೋ ಕಡಬ ಶಾಖಾ ಪ್ರಭಂದಕ ಮಹೇಶ ಕೆ.ಎನ್. ಸದಸ್ಯರು ಹಾಗು ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here