ಪಾಲ್ತಾಡಿ  : ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ , ಹಣ್ಣಿನ ಗಿಡ ನಾಟಿ

0

ಸವಣೂರು: ಬಿಜೆಪಿ ಪಾಲ್ತಾಡಿ ಬೂತ್ ಸಮಿತಿ 70 ಹಾಗೂ ಸುಳ್ಯ ಮಂಡಲ ಮಹಿಳಾ ಮೋರ್ಚಾ ಇದರ ಜಂಟಿ ಆಶ್ರಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮವು ಚೆನ್ನಾವರ ಉಳ್ಳಾಕುಲು ದೈವಸ್ಥಾನದ ವಠಾರದಲ್ಲಿ ನಡೆಯಿತು.

ದೈವಸ್ಥಾನದ ವಠಾರದಲ್ಲಿ ಹಣ್ಣಿನ ಗಿಡ ನೆಡಲಾಯಿತು. ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ. ಅವರು ,ದೀನ್ ದಯಾಳ್ ಉಪಾಧ್ಯಾಯರ ಜೀವನ ಹಾಗೂ ಆದರ್ಶ ನಡೆಗಳ ಬಗ್ಗೆ ವಿವರಿಸಿದರು.

ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್,ಸದಸ್ಯರಾದ ಭರತ್ ರೈ ಪಾಲ್ತಾಡಿ, ವಿನೋದಾ ರೈ ಚೆನ್ನಾವರ, ಪಾಲ್ತಾಡಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ಚೆನ್ನಾವರ ಉಳ್ಳಾಕುಲು ದೈವಸ್ಥಾನದ ಕಾರ್ಯದರ್ಶಿ ದೀಕ್ಷಿತ್ ಜೈನ್, ಕಾರ್ಯಕರ್ತರಾದ ಕೃಷ್ಣಪ್ಪ ಚೆನ್ನಾವರ,ನಂದ ಕುಮಾರ್, ನಿತೇಶ್ ಮಡಿವಾಳ,ಪ್ರದೀಪ್ ಕುಮಾರ್, ತನ್ವಿತ್ ,ಸತ್ಯಕುಮಾರ್ ಬಿ.ಎನ್, ಸಿಪ್ರಿಯನ್ ಉಪಸ್ಥಿತರಿದ್ದರು.

ಬೂತ್ 70 ಅಧ್ಯಕ್ಷ ,ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here