ಕೆದಂಬಾಡಿ ಬಿಜೆಪಿ ಬೂತ್ ಸಂಖ್ಯೆ 187 ಕ್ಕೆ ಆಯ್ಕೆ

0

ಅಧ್ಯಕ್ಷ: ಅಮರ್ ರೈ ದರ್ಬೆ , ಕಾರ್ಯದರ್ಶಿ: ಸುಭಾಷ್ ರೈ ಮಿತ್ತೋಡಿ


ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 187 ರ ಸಭೆ ಶರತ್ ಗುತ್ತು ರವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಬೂತಿಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಅಮರ್ ರೈ ದರ್ಬೆ ಹಾಗೂ ಕಾರ್ಯದರ್ಶಿಯಾಗಿ ಸುಭಾಶ್ ರೈ ಮಿತ್ತೋಡಿರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಬೂತಿನ ಮತಗಟ್ಟೆ ಏಜೆಂಟ್ ಆಗಿ ಕಿಶೋರ್ ಗೌಡ ದರ್ಬೆ, ಬಿಎಲ್‌ಎ ಟು ಆಗಿ ವಿಠಲ ರೈ ಮಿತ್ತೋಡಿ, ನಿಶಾಂತ್, ಮಹಿಳಾ ಸದಸ್ಯರಾಗಿ ಗೀತಾ ಎಸ್ ರೈ, ಸದಸ್ಯರಾಗಿ ರವೀಂದ್ರ ನಿಡ್ಯಾಣ, ಅಶೋಕ ಮಜಲಮೂಲೆ ಹಾಗೂ ಸದಸ್ಯರಾಗಿ ಪುಷ್ಪರಾಜ ರೈ, ಪದ್ಮನಾಭ ರೈ, ಅಶೋಕ ಗೌಡ ನಿಡ್ಯಾಣ, ಬಾಲಚಂದ್ರ ರೈ ಚಾವಡಿ ಆಯ್ಕೆಯಾದರು. ಬೂತಿನ ಮನ್ ಕಿ ಬಾತ್ ವೀಕ್ಷಣೆ ಪ್ರಮುಖರಾಗಿ ಹರೀಶ ರೈ ಮಿತ್ತೋಡಿ ಆಯ್ಕೆಯಾದರು.


ಸಭೆಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಸದಸ್ಯತ್ವ ಅಭಿಯಾನದ ಪುತ್ತೂರಿನ ಸಹ ಸಂಯೋಜಕ ನಿತೀಶ್ ಕುಮಾರ್ ಶಾಂತಿವನ, ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಸಹಕಾರ ಭಾರತಿ ಪುತ್ತೂರು ಇದರ ಅಧ್ಯಕ್ಷರಾದ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಹಾಗೂ ಕೆದಂಬಾಡಿ ಶಕ್ತಿ ಕೇಂದ್ರದ ಬಿಜೆಪಿ ಪ್ರಮುಖರಾದ ಶರತ್ ಗೌಡ ಗುತ್ತು, ಹಿರಿಯ ಕಾರ್ಯಕರ್ತರಾದ ಉಮೇಶ್ ರೈ ಮಿತ್ತೋಡಿ, ಬಾಲಕೃಷ್ಣ ರೈ ಬಾಳಾಯ, ವಸಂತ ರೈ ಗುತ್ತು, ನಾಗೇಶ್ ರೈ ಚಾವಡಿ, ತಾರನಾಥ ರೈ ಚಾವಡಿ, ಸುಭಾಶ್ ರೈ ಚಾವಡಿ, ದಿನೇಶ್ ಗೌಡ ಕಜೆ, ಹರೀಶ್ ಗೌಡ ಕಜೆ, ಜಗದೀಶ್ ರೈ ಚಾವಡಿ, ಸುಧೀನ್ ರೈ ಚಾವಡಿ, ಲೋಕೇಶ್ ರೈ ಮಜಲಮೂಲೆ, ಗೀತಾ ಸತೀಶ್ ರೈ ಗುತ್ತು, ರವಿರಾಜ್ ರೈ ಗುತ್ತು, ವಿಜೇತ್ ಕುಮಾರ್ ಬಾಳಾಯ, ಅರುಣ್ ರೈ ಬಾಳಾಯ, ಕಿರಣ್ ರೈ ಬಾಳಾಯ, ಸತೀಶ ರೈ ಮಿತ್ತೋಡಿ ನಿಕಿತ್ ಪೂಜಾರಿ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಬಾಲಚಂದ್ರ ರೈ ಸ್ವಾಗತಿಸಿ ವಂದಿಸಿದರು, ಪ್ರಜ್ಞಾ ಆರ್ ರೈ ಮತ್ತು ಸೀತಾ ಮೋನಪ್ಪ ಗೌಡ ಸಹಕರಿಸಿದರು.

LEAVE A REPLY

Please enter your comment!
Please enter your name here