ಮಳಿ, ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ದಾಳಿ-ಕೃಷಿ ತೋಟಕ್ಕೆ ಹಾನಿ

0

ಪುತ್ತೂರು: ಮಾಡ್ನೂರು ಗ್ರಾಮದ ಮುಖಾರಿಮೂಲೆ ಪರಿಸರದಲ್ಲಿ ಕಾಡಾನೆಗಳು ದಾಳಿ ನಡೆಸಿ ಕೃಷಿ ಹಾನಿ ಮಾಡಿದ ಬೆನ್ನಲ್ಲೇ ಮಳಿ ಹಾಗೂ ಪೆರ್ನಾಜೆ ಪರಿಸರದಲ್ಲಿ ಆನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದ ಬಗ್ಗೆ ವರದಿಯಾಗಿದೆ.

ಮಳಿ ಪರಿಸರದ ನಾರಾಯಣ ಆಚಾರ್ಯ, ಭಾಸ್ಕರ ಆಚಾರ್ಯ, ಹರೀಶ್ ಆಚಾರ್ಯ ಅವರ ತೋಟದಲ್ಲಿ ಆನೆ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಜೀಗುಜ್ಜೆ, ಅಡಿಕೆ, ಬಾಳೆ ಕೃಷಿ ಹಾನಿ ಉಂಟು ಮಾಡಿದೆ ಆನೆಗುಂಡಿ ರಕ್ಷಿತಾರಣ್ಯ ಮೂಲಕ ಅಮ್ಚಿನಡ್ಕದ ಮುಖಾರಿಮೂಲೆಗೆ ಬಂದ ಮೂರು ಕಾಡಾನೆಗಳು ಸ್ಥಳೀಯ ನಿವಾಸಿ ಅಬ್ದುಲ್ ರಝಾಕ್ ಮತ್ತು ಶರತ್ ಕುಮಾರ್ ರೈ ಎಂಬವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿ ಉಂಟುಮಾಡಿತ್ತು. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

LEAVE A REPLY

Please enter your comment!
Please enter your name here