ಬಿರುಮಲೆ ಬೆಟ್ಟದ ಗಾಂಧಿ ಮಂಟಪದಲ್ಲಿ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ

0

ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ದಿ ಯೋಜನೆ ಪುತ್ತೂರು ಮತ್ತು ಪ್ರಜ್ಞಾ ಆಶ್ರಮ ಬಿರುಮಲೆ ಬೆಟ್ಟ ಮತ್ತು ಅಭಿಮಾನಿ ಬಂಧುಗಳ ಸಹಯೋಗದಲ್ಲಿ ಬಿರುಮಲೆ ಬೆಟ್ಟದ ಗಾಂಧಿ ಮಂಟಪದಲ್ಲಿ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಬಿರುಮಲೆ ಬೆಟ್ಟ ಅಭಿವೃದ್ದಿ ಯೋಜನೆಯ ಅಧ್ಯಕ್ಷ ಜಗಜೀವನ್‌ದಾಸ್ ರೈ ದೀಪ ಬೆಳಗಿಸಿದರು. ರಘುಪತಿ ರಾಘವ ರಾಜಾರಾಂ ಭಜನೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಕ್ಸೇವಿಯರ್ ಡಿ’ಸೋಜಾ, ನಿತಿನ್ ಪಕ್ಕಳ, ಶಾಂತ ಕುಮಾರ್ ಮೊದಲಾದವರು ಗಾಂಧಿಯವರ ಕುರಿತು ಮಾತನಾಡಿದರು. ಯಂ.ಎಸ್.ಅಮ್ಮಣ್ಣಾಯ ಮತ್ತು ದತ್ತಾತ್ರೇಯ ರಾವ್ ದೇಶ ಭಕ್ತಿ ಗೀತೆ ಹಾಡಿದರು. ಸಮಿತಿಯ ಸದಸ್ಯರು, ಪ್ರಜ್ಞಾ ಅಶ್ರಮದ ಅಣ್ಣಪ್ಪ ಹಾಗೂ ಇತರ ಬಂಧುಗಳು ಉಪಸ್ಥಿತರಿದ್ದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here