ಅ.5-6: ಮುಂಬಯಿಯಲ್ಲಿ ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ

0

ಪುತ್ತೂರು: ಗಾನ ಗಂಧರ್ವ ಬೀರುದಾಂಕಿತ ಕಲರ್‍ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ನಿರಂತರ 3 ಗಂಟೆಗಳ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ಅ.5ರಂದು ಸಂಜೆ 6 ರಿಂದ ರೇತಿ`ಭವನ್ ಮಹಾತ್ಮ ಗಾಂಧಿ ರೋಡ್ ರೈಲ್ವೆ ನಿಲ್ದಾಣದ ಬಳಿ ಮುಂಬಯಿಯ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳ ಡೊಂಬಿವಲಿ(ಪ) ಇದರ 6೦ನೇ ವರ್ಷದ ವಜ್ರ ಮಹೋತ್ಸವದ ಅಂಗವಾಗಿ ಹಾಗೂ ಅ.6ರಂದು ಸಂಜೆ 6ರಿಂದ ಮುಂಬಯಿ ಶ್ರೀ ಗಾಮ್ ದೇವಿ ಅಂಬಿಕಾ ಶ್ರೀ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ ವಿದ್ಯಾವಿಹಾರ್ ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವ ಪ್ರಯುಕ್ತ ಸಂಗೀತ ಕಾರ್ಯಕ್ರಮ ನಡೆಯಲಿರುವುದು.


ತಂಡದ ಪ್ರಸಿದ್ಧ ಗಾಯಕಿಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿರುವುದು.ಕಾರ್ಯಕ್ರಮಕ್ಕೆ ಮುಂಬಯಿಯಲ್ಲಿ ನೆಲೆಸಿದ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿರುತ್ತದೆ..

LEAVE A REPLY

Please enter your comment!
Please enter your name here