ಈಶ್ವರಮಂಗಲ ಪೇಟೆ ಪರಿಸರದಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ – ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಉದ್ಯಮಿ

0

ಪುತ್ತೂರು: ರಸ್ತೆ ಬದಿಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರನ್ನು ಈಶ್ವರಮಂಗಲದ ಉದ್ಯಮಿಯೋರ್ವರು ಕೇರಳದ ಆಶ್ರಮಕ್ಕೆ ಸೇರಿಸಿರುವ ಘಟನೆ ನಡೆದಿದೆ.

ಈಶ್ವರಮಂಗಲ ಪರಿಸರದಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಈಶ್ವರಮಂಗಲ ಹನಿ ಸ್ವೀಟ್ಸ್‌ನ ಮಾಲಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಅವರ ಮುಂದಾಳತ್ವದಲ್ಲಿ ಮಂಜೇಶ್ವರದಲ್ಲಿರುವ ಸ್ನೇಹ ಅನಾಥಾಶ್ರಮಕ್ಕೆ ಸೇರಿಸಲಾಯಿತು. ಮೊದಲಿಗೆ ಈಶ್ವರಮಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಅಬ್ದುಲ್ ರಹಿಮಾನ್ ಹಾಜಿ ಅವರು ಬಳಿಕ ಅವರ ಸಹಕಾರದೊಂದಿಗೆ ಆಶ್ರಮಕ್ಕೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here