ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಅಗ್ನಿವೀರ್ ಆಗಿ ಆಯ್ಕೆಗೊಂಡ ಅವಿನ್ ರಿಗೆ ಗೌರವಾರ್ಪಣೆ

0

ಕಾವು: ಅಗ್ನಿಪತ್ ಯೋಜನೆಯ ಅಗ್ನಿವೀರ್ ಆಗಿ ಆಯ್ಕೆಗೊಂಡು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ತೆರಳುತ್ತಿರುವ ಕಾವು ಮಾಣಿಯಡ್ಕ ಚಂದ್ರಶೇಖರ ಮತ್ತು ಗೀತಾ ದಂಪತಿಯ ಪುತ್ರ ಅವಿನ್ ಎಂ ಇವರನ್ನು ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸಮಿತಿಯ ಗೌರವಾದ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಪೇಟ ತೋಡಿಸಿ ಶಾಲು,ಹಾರ ಹಾಕಿ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿ ಅಭಿನಂದನಾ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ನವೀನ್ ನನ್ಯ ಪಟ್ಟಾಜೆ,ಗೌರವ ಸಲಹೆಗಾರರಾದ ಚಂದ್ರಶೇಖರ ರಾವ್ ನಿಧಿಮುಂಡ,ಕೋಶಾಧಿಕಾರಿ ಕೃಷ್ಣ ಪ್ರಸಾದ್ ಕೊಚ್ಚಿ, ಮಾಜಿ ಅಧ್ಯಕ್ಷರಾದ ಲೋಕೇಶ್ ಚಾಕೋಟೆ, ಸದಸ್ಯರಾದ ಚಂದ್ರಶೇಖರ ಪಾಟಳಿ ಪಟ್ಟುಮೂಲೆ, ಕೇಶವ ಮೂರ್ತಿ,ಧನಂಜಯ ನಾಯ್ಕ, ನಹುಷಾ ಭಟ್,ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ,ಚಿತ್ರ ಪ್ರಸಾದ್ ರೈ ಅಂಕೊತ್ತೀಮಾರು,ನಾರಾಯಣ ಆಚಾರ್ಯ ಮಳಿ,ಸಂಕಪ್ಪ ಪೂಜಾರಿ,ನಿರಂಜನ ಕಮಲಡ್ಕ,ವಿಶ್ವನಾಥ ಕೆರೆಮಾರು,ಸಂದೇಶ್ ಚಾಕೋಟೆ, ಪ್ರಜ್ವಲ್ ಕೆರೆಮಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here