ವಿಧಾನ ಪರಿಷತ್ ಉಪ ಚುನಾವಣೆ- ಶಾಂತಿಯುತ ತೆರೆ

0

ಪುತ್ತೂರು: ಕರ್ನಾಟಕ ವಿಧಾನ ಪರಿಷತ್ ನಲ್ಲಿ ತೆರವಾದ ಸ್ಥಾನಕ್ಕೆ ಅ.21ರಂದು ನಡೆದ ಚುನಾವಣೆಯು ಶಾಂತಿಯುತವಾಗಿ ತೆರೆ ಕಂಡಿದೆ.


ಅರಿಯಡ್ಕ ಗ್ರಾ.ಪಂ ಹೊರತು ಪಡಿಸಿ ಉಳಿದಂತೆ ತಾಲೂಕಿನ 21 ಗ್ರಾ.ಪಂ ಹಾಗೂ 1 ನಗರ ಸಭೆಯ ಮತಗಟ್ಟೆಗಳಲ್ಲಿ ಶೇ.100 ಮತದಾನವಾಗಿದೆ. ಅರಿಯಡ್ಕ ಗ್ರಾ.ಪಂನ ಒಟ್ಟು 23 ಸದಸ್ಯರ ಪೈಕಿ 22 ಮಂದಿ ಮತಚಲಾಯಿಸಿದ್ದಾರೆ.

ಮಹಿಳಾ ಸದಸ್ಯರೋರ್ವರು ಅನಾರೋಗ್ಯ ಕಾರಣದಿಂದಾಗಿ ಮತಗಟ್ಟೆಗೆ ತೆರಳಲು ಅನಾನುಕೂಲವಾಗಿರುವ ಹಿನ್ನೆಲೆಯಲ್ಲಿ ಅವರು ಮತ ಚಲಾಯಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here