ಪುತ್ತೂರು: ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 5ನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವ ಹಾಗು ನೇಮೋತ್ಸವದ ಅಂಗವಾಗಿ ಗೊನೆಮುಹೂರ್ತ ಮತ್ತು ಚಪ್ಪರಮುಹೂರ್ತವು ಇತ್ತೀಚೆಗೆ ನಡೆಯಿತು.
ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ್ ಬಾರ್ಯ ಮತ್ತು ಅರ್ಚಕ ಗುರುಪ್ರಸಾದ್ ನೂರಿತ್ತಾಯರು ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು. ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಟ್ರಸ್ಟ್ನ ಪದಾಧಿಕಾರಿಗಳಾದ ಪ್ರಶಾಂತ್ ಪೈ , ನಾರಾಯಣ ಗೌಡ, ಹಾಗು ಸದಸ್ಯರಾದ ಮನೋಹರಶೆಟ್ಟಿ, ರಾಮಣ್ಣಗೌಡ, ಚೇತನ್ ಅದಮ್ಮ, ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ಗೌಡ , ಶಿವರಾಮ ನಾಯ್ಕ, ಕೃಷ್ಣಪ್ಪ ಪೂಜಾರಿ , ದಯಾನಂದ ಆಲಡ್ಕ ವಿದ್ಯಾಪ್ರಭಾಕರ್, ಪ್ರೇಮ ನೂರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.