ಪರಣೆ: ಸವಣೂರು ‌ಶ್ರೀ ವಿಷ್ಣುಮೂರ್ತಿ ದೇವಾಲಯದ ದಾರಿ ಸೂಚಕ ನಾಮ ಫಲಕ‌ ಅನಾವರಣ

0

ಪುತ್ತೂರು : ಸವಣೂರು – ಬೆಳ್ಳಾರೆ ರಸ್ತೆಯ ಪರಣೆಯಲ್ಲಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯರವರ ಕೊಡುಗೆಯಾಗಿ ನೀಡಿದ ದಾರಿ ಸೂಚಿಸುವ ಫಲಕ ಫೆ‌.8 ರಂದು‌ ಲೋಕರ್ಪಣೆಗೊಂಡಿತು.

ಲೋಕಾರ್ಪಣಾ ಸಂದರ್ಭದಲ್ಲಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಸಮಿತಿಯ ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಗ್ರಾಮ ದೈವ ಶ್ರೀರಾಡಿ‌ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪೂರ್ವಾಧ್ಯಕ್ಷ ಪ್ರಜ್ವಲ್ ಕೆ.ಆರ್.ಕೋಡಿಬೈಲು, ಸವಣೂರು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಅಂಗಡಿಮೂಲೆ, ಮಾಜಿ‌ ಸದಸ್ಯ ಸತೀಶ್ ಬಲ್ಯಾಯ ಕನ್ನಡ ಕುಮೇರು, ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ , ಜೋಗಿ ಬೇರಿಕೆ, ಸುಂದರ ಶೆಟ್ಟಿ ಬರೆಮೇಲುರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here