ಪುತ್ತೂರು: ನಮ್ಮ ವ್ಯಕ್ತಿತ್ವಕ್ಕೊಂದು ಮೆರುಗು ನೀಡುವುದು ಮಾತ್ರವಲ್ಲದೇ, ಆಪತ್ಕಾಲದಲ್ಲೂ ನಮ್ಮ ನೆರವಿಗೆ ಬರುವ ‘ಚಿನ್ನ’ ನಿಜವಾಗಿಯೂ ಜನರ ಪಾಲಿಗೆ ನಿಜವಾದ ‘ಆಪದ್ಬಾಂಧವ’ನಾಗಿದೆ. ಇನ್ನು, ಪ್ರಾಚೀನ ಪರಂಪರೆಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಆಭರಣಗಳು ಹಲವರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಹಾಗೆ ಆಭರಣಗಳ ವಿನ್ಯಾಸಗಳಲ್ಲಿ ಪ್ರಾಚೀನತೆಯನ್ನು ಬಯಸುವವರಿಗಾಗಿ ಹತ್ತೂರ ಒಡೆಯನ ಊರಿನ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಫೆ.24ರಿಂದ ಪ್ರಾಚೀನ ಪರಂಪರೆಯ ಚಿನ್ನಾಭರಣ ಮಹೋತ್ಸವ ಆರಂಭಗೊಂಡಿದೆ.
ಪುರಾತನ ಆಭರಣಗಳು ಸಾಮಾನ್ಯ ಆಭರಣಗಳಂತೆ ಇದ್ದು ಪ್ರಾಚೀನ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಆ್ಯಂಟಿಕ್ ಆಭರಣಗಳನ್ನು ವಜ್ರಗಳು, ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಮುತ್ತುಗಳಂತಹ ಅಮೂಲ್ಯ ಲೋಹಗಳಿಂದ ತಯಾರಿಸಲಾಗುತ್ತದೆ. ಜೆ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಆ್ಯಂಟಿಕ್ ಆಭರಣಗಳ ವಿಭಾಗ ‘ಪ್ರಾಚಿ’ಯಲ್ಲಿ ಗ್ರಾಹಕರ ಕಣ್ಮನ ಸೆಳೆಯುವ ಅಮೋಘ ಆಭರಣಗಳ ಸಂಗ್ರಹವಿದ್ದು ಸಂಸ್ಥೆಯು ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ಆ್ಯಂಟಿಕ್ ಆಭರಣದ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಆ್ಯಂಟಿಕ್ ಆಭರಣದ ಖರೀದಿಗೆ ಪ್ರತಿ ಗ್ರಾಂಗೆ ರೂ. 200/- ನೇರ ರಿಯಾಯಿತಿ, 40ಗ್ರಾಂ ಮೇಲ್ಪಟ್ಟ ಆ್ಯಂಟಿಕ್ ಆಭರಣದ ಖರೀದಿಗೆ ಪ್ರತಿ ಗ್ರಾಂಗೆ ರೂ. 250/- ನೇರ ರಿಯಾಯಿತಿ, 80ಗ್ರಾಂ ಮೇಲ್ಪಟ್ಟ, ಆ್ಯಂಟಿಕ್ ಆಭರಣದ ಖರೀದಿಗೆ ಅಚ್ಚರಿಯ ಕೊಡುಗೆಗಳನ್ನು ನೀಡಲಾಗುತ್ತದೆ.
ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ಧವಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.
ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಈ ಆಫರ್ ಪುತ್ತೂರು, ಸುಳ್ಯ, ಮೂಡಬಿದ್ರೆ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.