ಪುತ್ತೂರು: ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ರಾಜ್ಯ ಸಂಸ್ಥೆಯು ನಡೆಸುವ ರಾಜ್ಯಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಕನ್ನಡಮಾಧ್ಯಮ ಶಾಲೆಯ ಎಂಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಸ್ಕೌಟ್ ವಿಭಾಗದಲ್ಲಿ ಕೀರ್ತನ್ ಕುಲಾಲ್, ಧನುಷ್, ಯಜ್ಞ ಮತ್ತು ಗೈಡ್ಸ್ ವಿಭಾಗದಲ್ಲಿ ಪ್ರಜ್ಞಾ ನಿಡ್ವಣ್ಣಾಯ, ದೃಷಾ, ನಿಸರ್ಗ ಮಾರ್ಕೊಪೋಲೋ ತೋಟರ್, ಪೃಥ್ವಿ, ಸ್ನೇಹ ಎಂ ಉತ್ತೀರ್ಣರಾಗಿದ್ದಾರೆ.
ಇವರಿಗೆ ಸ್ಕೌಟ್ ವಿಭಾಗದಲ್ಲಿ ಶಿಕ್ಷಕರಾದ ಶ್ರೀ ರಾಜೇಶ್ ನಂದಿಲ ಮತ್ತು ಗೈಡ್ ವಿಭಾಗದಲ್ಲಿ ಹರಿಣಾಕ್ಷಿ ಮತ್ತು ಶುಭಶ್ರೀ ಮಾತಾಜಿ ತರಬೇತಿ ನೀಡಿರುತ್ತಾರೆ.