ಪುತ್ತೂರು:ಸ್ಕೂಟರ್ ದುರಸ್ಥಿಗಳ ಹಿರಿಯ ತಜ್ಞರಾಗಿದ್ದ ಹಾರಾಡಿ ವಿಷ್ಣು ಭಟ್ (72ವ)ರವರು ಮಾ.12ರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು.
ಹಾರಾಡಿ ನಿವಾಸಿ ವಿಷ್ಣು ಭಟ್ ಅವರು ಹಲವು ವರ್ಷಗಳ ಹಿಂದೆ ಬೊಳುವಾರಿನಲ್ಲಿ ಸ್ಕೂಟರ್ಗಳ ದುರಸ್ಥಿಗಳಲ್ಲಿ ಹಿರಿಯ ತಜ್ಞರಾಗಿದ್ದರು. ನಿವೃತ್ತಿಯ ಬಳಿಕ ಮನೆಯಲ್ಲೇ ಇದ್ದು ವಯೋಸಹಜ ನಿಧನರಾದರು. ಮೃತರು ಪತ್ನಿ ಜಯಲಕ್ಷ್ಮಿ, ಪುತ್ರ ಶ್ಯಾಮಪ್ರಕಾಶ್, ಪುತ್ರಿಯರಾದ ದಿವ್ಯಾಲಕ್ಷ್ಮೀ, ದೀಕ್ಷಾ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಾ.13ರಂದು ಪುತ್ತೂರು ಚಿಕ್ಕಪುತ್ತೂರು ಸ್ಮಶಾನದಲ್ಲಿ ನಡೆಯಿತು.