ಪಾಲ್ತಾಡಿ : ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಪ್ರತಿಷ್ಟಾ ದಿನ

0

ಸವಣೂರು : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಪ್ರತಿಷ್ಠಾ ದಿನದ ಅಂಗವಾಗಿ ಮಾ.19ರಂದು ಕಲಶ ಸೇವೆ ಹಾಗೂ ಶ್ರೀ ಮಹಾಗಣಪತಿ ಹೋಮ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿನಯಚಂದ್ರ ಕೆಳಗಿನಮನೆ, ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು,ದಿವಾಕರ ಬಂಗೇರ ಬೊಳಿಯಾಲ, ಪದ್ಮಪ್ರಸಾದ್ ಕಲಾಯಿ,ಕಾರ್ಯದರ್ಶಿ ಜಯರಾಮ ಗೌಡ ದೊಡ್ಡಮನೆ,ಜತೆ ಕಾರ್ಯದರ್ಶಿಗಳಾದ ತಾರಾನಾಥ ಬೊಳಿಯಾಲ, ಶಿವಾನಂದ ಸೈನಿಕ ನಿಲಯ,ಖಜಾಂಚಿ ಪುರುಷೋತ್ತಮ ಅಂಗಡಿಹಿತ್ಲು,ಬಾಲಕೃಷ್ಣ ಗೌಡ ಅಂಗಡಿಹಿತ್ಲು,ವಿಶ್ವನಾಥ ರೈ ನಡುಕೂಟೇಲು,ಕಿಟ್ಟಣ್ಣ ರೈ ನಡುಕೂಟೇಲು, ಪ್ರತೀಕ್ ರಾಜ್ ಖಂಡಿಗೆ,ಮಿತೇಶ್ ಗೌಡ,ಸುಖೇಶ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here